ಬೀಜಾಡಿ ನಾರಾಯಣ ಭಂಡಾರಿ ಅವರಿಗೆ ಶ್ರಮ ಸಮ್ಮಾನ ಪ್ರಶಸ್ತಿ

JANANUDI.COM NETWORK

 

ಬೀಜಾಡಿ ನಾರಾಯಣ ಭಂಡಾರಿ ಅವರಿಗೆ ಶ್ರಮ ಸಮ್ಮಾನ ಪ್ರಶಸ್ತಿ

 

ಬೀಜಾಡಿ: ಉಡುಪಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕೊಡಮಾಡುವ 2020ನೇ ಸಾಲಿನ ಶ್ರಮ ಸಮ್ಮಾನ ಪ್ರಶಸ್ತಿಯು ಬೀಜಾಡಿ ನ್ಯೂ ಶೀತಲ್ ಹೇರ್ ಡ್ರೆಸಸ್ ಮಾಲಿಕ ನಾರಾಯಣ ಭಂಡಾರಿ ಅವರು ಆಯ್ಕೆಯಾಗಿದ್ದು, ಕ್ಷೌರಿಕ ವೃತ್ತಿಯಲ್ಲಿ ಮಾಡಿದ ವಿಶೇಷ ಸೇವೆಗಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಭಾನುವಾರ ಉಡುಪಿ ಮಣಿಪಾಲ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಾರ್ಮಿಕ ಸನ್ಮಾನ ದಿನಾಚರಣೆಯ ಸಮಾರಂಭದಲ್ಲಿ ಶ್ರಮ ಸಮ್ಮಾನ ವಿಶೇಷ ಪ್ರಶಸ್ತಿಯನ್ನು ನಾರಾಯಣ ಭಂಡಾರಿ ಪಡೆದರು. ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರು ಪ್ರಶಸ್ತಿ ಪ್ರದಾನ ಮಾಡಿದರು.
ಚಿತ್ರ//02ಸಿಬಿ2//