ಬೀಜಾಡಿ ದಿ.ಅನಂತಪದ್ಮನಾಭರಿಗೆ ಭಾವಪೂರ್ಣ ಶ್ರದ್ಥಾಂಜಲಿ

JANANUDI.COM NETWORK

 

 

ಬೀಜಾಡಿ ದಿ.ಅನಂತಪದ್ಮನಾಭರಿಗೆ ಭಾವಪೂರ್ಣ ಶ್ರದ್ಥಾಂಜಲಿ

 

ಬೀಜಾಡಿ:ಇತ್ತೀಚೆಗೆ ನಿಧನರಾದ ಬೀಜಾಡಿ ಮಿತ್ರ ಸಂಗಮದ ಮಾಜಿ ಅಧ್ಯಕ್ಷ,ಬಹುಮುಖ ಪ್ರತಿಭೆಯ ಬೀಜಾಡಿ ದಿ.ಅನಂತಪದ್ಮನಾಭ ಅವರಿಗೆ ಭಾವಪೂರ್ಣ ಶ್ರದ್ಥಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ಬೀಜಾಡಿ-ಗೋಪಾಡಿ ಮಿತ್ರ ಸಂಗಮ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆಯಿತು.
ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ಮಾತನಾಡಿ,ಮಿತ್ರ ಸಂಗಮವನ್ನು ಬೆಳೆಸುವಲ್ಲಿ ಅನಂತಪದ್ಮನಾಭರ ಶ್ರಮ ದೊಡ್ಡದು.ಬಹುಮುಖ ಪ್ರತಿಭೆಯನ್ನು ಹೊಂದಿರುವ ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ಯುವಕರಿಗೆ ಯಕ್ಷಗಾನ, ನಾಟಕ, ಯೋಗವನ್ನು ಕಲಿಸುವ ಗುಣವನ್ನು ಹೊಂದಿದ್ದರು. ಸಂಘಟನೆಯನ್ನು ತಳಮಟ್ಟದಲ್ಲಿ ಕಟ್ಟುತ್ತಿದ್ದ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದರು.ಸಣ್ಣ ವರ್ಷದಲ್ಲೇ ಅವರ ಸಾವು ಅನ್ಯಾಯ ಎಂದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ, ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕ ಕೃಷ್ಣಮೂರ್ತಿ ಮಯ್ಯ, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಗೋಪಾಡಿ ಯುವಕ ಮಂಡಲದ ಮಾಧವ ಆಚಾರ್ಯ ನುಡಿನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮೌನ ಪ್ರಾರ್ಥನೆ ಮಾಡಿ,ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಲಾಯಿತು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ//02ಸಿಬಿ2// ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ಮಾತನಾಡಿದರು.