ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

JANANUDI.COM NETWORK 

 

ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

 

ಕುಂದಾಪುರ : ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಈದ್ ಮಿಲಾದುನ್ನಬಿಯ ಪ್ರಯುಕ್ತ ಎಸ್.ಎಸ್.ಎಫ್,ಕುಂದಾಪುರ ಹಾಗು ಕುಂದಾಪುರ ದರ್ಗಾ ಘÀಟಕದ ವತಿಯಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪುರಸಭೆ ಸದಸ್ಯ ಅಬ್ಬು ಮಹ್ಮದ್ ಹಾಗೂ ಎಸ್.ಎಸ್.ಎಫ್. ಸದಸ್ಯರು ಹಾಗೂ ದರ್ಗಾ ಘಟಕದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ರೋಗಿಗಳನ್ನು ಉಪಚರಿಸಿದರು. ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ರಾಬಟ್ ್ ಘಟಕಗಳ ಮಾನವೀಯ ಸೇವೆಗಳನ್ನು ಹುರಿದುಂಬಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.