ಪ್ರಕಾಶ್​ ರೈ ವಿರುದ್ಧ ಮಾನಹಾನಕಾರಿ ಟ್ವೀಟ್​ ಪ್ರಕರಣ: ಬಿಜೆಪಿ ಸಂಸದ ಪ್ರತಾಪ​ ಸಿಂಹ ನ್ಯಾಯಾಂಗದ ವಶ

ಮಾ. 8: ಪ್ರಕಾಶ್ ರೈ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರವಾಗಿ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಪ್ರತಾಪ್​ ಸಿಂಹ ವಿರುದ್ಧ ಪ್ರಕಾಶ್​ ರೈ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ  ಮೈಸೂರು-ಕೊಡಗು ಬಿಜೆಪಿ ಸಂಸದ  ಪ್ರತಾಪ್ ಸಿಂಹ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆಯೆಂದು ತಿಳಿದು ಬಂದಿದೆ.

 ಈ ಮಾನಹಾನಿಕರ ಪ್ರಕರಣದಲ್ಲಿ ಪ್ರತಾಪ್​ ಸಿಂಹ ಅವರಿಗೆ ನ್ಯಾಯಲಯ​ ಜಾಮೀನುರಹಿತ ವಾರೆಂಟ್​ ಜಾರಿಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಲು ಪ್ರತಾಪ್​ ಸಿಂಹ ಅವರನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಿಕ್ಕೆ ನ್ಯಾ. ರಾಮಚಂದ್ರ‌ ಹದ್ದರ್ ಆದೇಶ ನೀಡಿದ್ದಾರೆ.

    ಈ ಟ್ವೀಟ್ ಪ್ರಕರಣದಲ್ಲಿ ಪ್ರತಾಪ್​ ಸಿಂಹ ಮತ್ತು ಪ್ರಕಾಶ್​ ರೈ ನಡುವೆ ಶೀತಕ ಸಂಘರ್ಷ ಏರ್ಪಟ್ಟಿತ್ತು. ಹಾಗಾಗಿ ಪ್ರಕಾಶ್​ ರೈ ತಮ್ಮ ವಿರುದ್ದದ  ಮಾನಹಾನಿಕಾರಕ  ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದ ಪ್ರತಾಪ್​ ಸಿಂಹ ವಿರುದ್ಧ ಕೇವಲ ಒಂದು ರೂ. ಪರಿಹಾರ ಕೋರಿ ಪ್ರಕಾಶ್​ ರೈ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಸಂಬಂಧ ವಿಚಾರಣೆಗಾಗಿ ನ್ಯಾಯಲಯಕ್ಕೆ  ಹಾಜರಾಗುವಂತೆ ಪ್ರತಾಪ್​ ಸಿಂಹ ಅವರಿಗೆ ಅನೇಕ ಬಾರಿ ನ್ಯಾಯಲಯ ಸಮನ್ಸ್​ ಕಳಿಸಿತ್ತು. ಆದರೆ, ಪ್ರತಾಪ್​ ನ್ಯಾಯಾಲಯಕ್ಕೆ ಹಾಜರಾಗುತಿರಲಿಲ್ಲಾ,ಹಾಗಾಗಿ  ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದರು.  ಇಂದು ಸಂಸದ ಪ್ರತಾಪ ಸಿಂಹ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾಗ  ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಿಕ್ಕೆ ಆದೇಶ ನೀಡಿದ್ದಾರೆ.

ಚಿತ್ರಗಳು ಕ್ರಪೆಯಿಂದ