ಪಿ.ಯು.ಸಿಯಲ್ಲಿ ರಾಜ್ಯಕ್ಕೆ 4ನೇ, ಜಿಲ್ಲೆಗೆ ಪ್ರಥಮಳಾದ ಸ್ವಾತಿ ಪೈಗೆ ಕುಂದಾಪುರ ವಲಯ ಕಥೊಲಿಕ್ ಸಭಾ – ಶೆವೊಟ್ ಪ್ರತಿಷ್ಠಾನ್ ಇವರಿಂದ ಸನ್ಮಾನ

JANANUDI.COM NETWORK

 

 

ಕುಂದಾಪುರ,ಜು.22: 2019-20 ರ ಸಾಲಿನ ಪಿ.ಯು.ಸಿ.ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4 ನೇ ರ್‍ಯಾಂಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ, ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ವಿಧ್ಯಾರ್ಥಿ, ಕುಂದಾಪುರದ ಶಿವಾನಂದ್ ಪೈ ಮತ್ತು ಶಿಲ್ಪಾ ಪೈ ಇವರ ಪುತ್ರಿ ಸ್ವಾತಿ ಪೈ ಅವಳನ್ನು ಕುಂದಾಪುರ ವಲಯ ಕಥೊಲಿಕ್ ಸಭಾ ಮತ್ತು ಶೆವೊಟ್ ಪ್ರತಿಷ್ಠಾನ್ ಸಂಸ್ಥೆಯ ಪರವಾಗಿ ಪದಾಧಿಕಾರಿಗಳು ಅವಳ ಮನೆಗೆ ತೆರಳಿ ಸನ್ಮಾನಿಸಿ ಅಭಿನಂಧಿಸಿ ಅವಳ ಮುಂದಿನ ಭವಿಸ್ಯವು ಉಜ್ವಲವಾಗಲೆಂದು ಹಾರೈಸಿದರು.

     ಈ ಸಂದರ್ಭದಲಿ ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಕಾರ್ಯದರ್ಶಿ ಹೆನ್ರಿ ಮೆಲ್ವಿನ್ ಪುಟಾರ್ಡೊ,  ಖಚಾಂಚಿ ಮೈಕಲ್ ಪಿಂಟೊ, ಸರ್ಕಾರಿ ಸವಲತ್ತು ಸಂಚಾಲಕ, ಶೆವೊಟ್ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಸ್ತ್ರೀ ಸಶಕ್ತೀಕರಣ ಸಂಚಾಲಕಿ ಡಾ|ಸೋನಿ ಡಿಕೋಸ್ತಾ, ಕುಂದಾಪುರ ಕಥೊಲಿಕ್  ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಶೆವೊಟ್,  ಪ್ರತಿಷ್ಠಾನದ ಮಾಜಿ ಅಧ್ಯಕ್ಷ  ಕಿರಣ್ ಕ್ರಾಸ್ತಾ, ಸ್ವಾತಿ ಪೈ ತಂದೆ ಶಿವಾನಂದ ಪೈ,ತಾಯಿ ಶಿಲ್ಪಾ ಪೈ, ಅಕ್ಕ ಶ್ರೇಯಾ ಪೈ ಉಪಸ್ಥಿತರಿದ್ದರು.