ನಿಧನರಾದ ಮಾಜಿ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ವಿನ್ನಿಫ್ರೆಡ್ ಪೆರ್ನಾಂಡೀಸ್  ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಭೇಟಿ ನೀಡಿ ಮೃತದೇಹಕ್ಕೆ ಗೌರವ ಅರ್ಪಿಸಿ, ಕುಟುಂಬಿಕರಿಗೆ ಸಾಂತ್ವಾನ

JANANUDI.COM NETWORK

 

 

 

ನಿಧನರಾದ ಮಾಜಿ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ವಿನ್ನಿಫ್ರೆಡ್ ಪೆರ್ನಾಂಡೀಸ್  ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಭೇಟಿ ನೀಡಿ ಮೃತದೇಹಕ್ಕೆ ಗೌರವ ಅರ್ಪಿಸಿ, ಕುಟುಂಬಿಕರಿಗೆ ಸಾಂತ್ವಾನ

 

 

 

 

ಕುಂದಾಪುರ, ಎ.29:  ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಮೃತರಾದ ಕುಂದಾಪುರದ ಮಾಜಿ ಶಾಸಕಿ, ಕಾಂಗ್ರೆಸ್ ಹಿರಿಯ ನಾಯಕಿ ವಿನ್ನಿಫ್ರೆಡ್ ಪೆರ್ನಾಂಡೀಸ್ (91) ರವರ ಮನೆಗೆ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಯವರು ಭೇಟಿ ನೀಡಿ ಮೃತದೇಹಕ್ಕೆ ಗೌರವ ಅರ್ಪಿಸಿ, ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. 

ಈ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕ ಮಲ್ಯಾಡಿ ಶಿವರಾಮ ಶೆಟ್ಟಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಯುವಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ,  ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ, ಕೇಶವ ಭಟ್, ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಡೆವಿಡ್ ಸಿಕ್ವೇರಾ ಮುಂತಾದವರು ಉಪಸ್ಥಿತರಿದ್ದರು.