ನಾಗಲಾಪುರ ಮಠದಲ್ಲಿ ಗಿರಿಜಾ ಕಲ್ಯಾಣೋತ್ಸವ ಕೋವಿಡ್ ವಾರಿಯರ್ಸ್‍ಗೆ ಸನ್ಮಾನ-ಲಕ್ಷದೀಪೋತ್ಸವ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ತಾಲ್ಲೂಕಿನ ನಾಗಲಾಪುರದ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ಕೊನೆ ಕಾರ್ತಿಕ ಸೋಮವಾರದ ಅಂಗವಾಗಿ ಶಿವಪಾರ್ವತಿ ಕಲ್ಯಾಣೋತ್ಸವ, ಲಿಂಗೈಕ್ಯ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ 18ನೇ ವರ್ಷದ ಸಂಸ್ಥಾನೋತ್ಸವನ್ನು ಡಿ.13 ರಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್‍ಗಳು ಹಾಗೂ ಸಮಾಜ ಸೇವಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಇಡೀ ಕಾರ್ಯಕ್ರಮವು ಸಂಸ್ಥಾನದ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ನೆರವೇರಲಿದೆ.
13 ರಂದು ಸಂಜೆ ಇಷ್ಟಲಿಂಗ ದೀಕ್ಷೆ ನಡೆಯಲಿದ್ದು, ದೀಕ್ಷೆ ಪಡೆಯಲಿಚ್ಚಿಸುವವರು ಮಠಕ್ಕೆ ಆಗಮಿಸಬೇಕು ಜತೆಯಲ್ಲಿ ದೀಕ್ಷೆ ವಟುಗಳು ಮಡಿಪಂಚೆ, ವಸ್ತ್ರ, ಕರಿಡಿಗೆ ತರಲು ಸೂಚಿಸಲಾಗಿದೆ.
14 ರ ಸೋಮವಾರ ಬೆಳಗ್ಗೆ 6 ರಿಂದ ಲಿಂಗ ದೀಕ್ಷೆ, ಮಹಾನ್ಯಾಸ ಪೂರ್ಣ, ಗಿರಿಜಾ ಕಲ್ಯೋಣೋತ್ಸವ, ಮಹಾರುದ್ರಾಭಿಷೇಕ, ಗಣಪೂಜೆ, 10 ರಿಂದ 11-30 ಗಂಟೆಗೆ ಮಾಂಗಲ್ಯ ಧಾರಣೆ ನಡೆಯಲಿದೆ.
11-30ಕ್ಕೆ ಜನಜಾಗೃತಿ ಧರ್ಮ ಸಮಾರಂಭವನ್ನು ಶಾಸಕ ಕೆ.ಶ್ರೀನಿವಾಸಗೌಡ ಉದ್ಘಾಟಿಸಲಿದ್ದು, ಬಾಳೆಹೊನ್ನೂರಿನ ಶ್ರೀ ರೇಣುಕಾ ಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಉಪಸ್ಥಿತಿಯಲ್ಲಿ ಸಂಸದ ಎಸ್.ಮುನಿಸ್ವಾಮಿ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ದಾಸೋಹ ಭವನ ಕಾಮಗಾರಿಗೆ ಪೂಜೆ ನಡೆಯಲಿದೆ.
ಇದೇ ದಿನ ಸಂದೆ ಲಕ್ಷದೀಪೋತ್ಸವ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.