ತಾಲೂಕು ಮಟ್ಟಕ್ಕೆ  ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ತಾಲೂಕು ಮಟ್ಟಕ್ಕೆ  ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ

 ಇತ್ತೀಚಿಗೆ ಅಡ್ಡಗಲ್‍ನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಕಂಡ್ಲೇವಾರಿಪಲ್ಲಿಯ ಕಾವೇರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಕೆ.ವಿ.ತರುಣ್ ಉದ್ದದಜಿಗಿತ,ಎತ್ತರ ಜಿಗಿತ ದೇಶಿಕ್‍ರೆಡ್ಡಿ, ಗುಂಡು ಎಸೆತ ಮಂಜುಮೌರ್ಯ,200ಮೀ ಓಟ ಪೃಥ್ವಿರಾಜ್ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿಆರ್‍ಪಿ ಕಲಾಶಂಕರ್,ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕಿಟ್ಟಣ್ಣ,ಶಿಕ್ಷಕರಾದ ಬಾಬು,ಸಂತೋಷ್‍ಶಿರಗಾವಿರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

 ಇತ್ತೀಚಿಗೆ ಅಡ್ಡಗಲ್‍ನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಗುಂಪು ಆಟಗಳಾದ ಬಾಲಕರ ಹಾಗು ಬಾಲಕೀಯರ ಖೋ-ಖೋ,ಥ್ರೋಬಾಲ್,ಮೇಲಾಟಗಳಲ್ಲಿ 400ಮೀಟರ್ ರಿಲೆ, 200ಮೀ ಗುಂಡು ಎಸೆತ,ಹರ್ಡಲ್ಸ್ ಎತ್ತರ ಜಿಗಿತಗಳಲ್ಲಿ ಪ್ರಥಮ ಸ್ಥಾನವನ್ನು ಪಡದುಕೊಂಡು, ಶಾಲೆಗೆ ಚಾಂಪಿಯನ್ ಪದಕ ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕಿಟ್ಟಣ್ಣ, ಶಾಲೆಯ ಮುಖ್ಯಶಿಕ್ಷಕಿ ಪ್ರಮೀಳಮ್ಮ,ಶಿಕ್ಷಕರಾದ ನರಸಮ್ಮ,ಕೆ.ಧನಲಕ್ಷ್ಮಿ,ಇ.ಈರಪ್ಪ,ಕೆ.ಜೆ.ವೆಂಕಟಪ್ಪ,ದೇವಿಡ್‍ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.