ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಕುಂದಾಪುರದಲ್ಲಿ ನಿತ್ಯ ಅನ್ನದಾನ

JANANUDI.COM NETWORK

 

ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಕುಂದಾಪುರದಲ್ಲಿ ನಿತ್ಯ ಅನ್ನದಾನ

 

ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಪ್ರತಿನಿತ್ಯ, ಅನ್ನದಾನ ಮಾಡುವ ವಿಶೇಷ ಸೇವಾ ಕಾರ್ಯಕ್ರಮ ಅನುಷ್ಟಾನಗೊಳಿಸುತ್ತಿದ್ದು, ಕುಂದಾಪುರ ಪರಿಸರದಲ್ಲಿ ಪ್ರತಿನಿತ್ಯ 120 ಜನರಿಗೆ ಮಧ್ಯಾಹ್ನ , ರಾತ್ರಿ ಊಟ ಒದಗಿಸುತ್ತಿದೆ.
ವಾಹನಗಳಲ್ಲಿ ಅನ್ನ, ಸಾಂಬಾರು, ಸಾರು, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತುಂಬಿಕೊಂಡು ತಟ್ಟೆಯಲ್ಲಿ ಊಟ ವಿತರಿಸಲಾಗುತ್ತಿದೆ. ತಾಲ್ಲೂಕು ತಹಶೀಲ್ದಾರ್ ಮಾರ್ಗದರ್ಶನ ದೊಂದಿಗೆ ಈ ಕಾರ್ಯಕ್ರಮದಲ್ಲಿ ಸಿಟಿ ಜೇಸಿಸ್‍ನಅಧ್ಯಕ್ಷ ನಾಗೇಶ್ ನಾವುಡ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ ನಾವುಡ, ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ. ಕೆ.ನಾರಾಯಣ, ಪಾಲ್ಗೊಂಡಿದ್ದರು.