ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಸ್. ಮುನಿಸ್ವಾಮಿಯ ರವರಿಗೆ ಅಭಿನಂದನ ಕಾರ್ಯಕ್ರಮಗಳು

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಸ್. ಮುನಿಸ್ವಾಮಿಯ ರವರಿಗೆ ಅಭಿನಂದನ ಕಾರ್ಯಕ್ರಮಗಳು

ಕೋಲಾರ.ಜೂ.12: ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಸ್. ಮುನಿಸ್ವಾಮಿ ರವರಿಗೆ ಜೂನ್ 13 ರಿಂದ 16 ರವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ ವೆಂಕಟಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ, 13ರ ಗುರುವಾರ ಮಧ್ಯಾಹ್ನ 2-30 ಗಂಟೆಗೆ ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್‍ಗೌಡ ಕಲ್ಯಾಣ ಮಂಠಪ, ಜೂ, 15ರ ಶನಿವಾರ ಬೆಳಗ್ಗೆ 11-00 ಗಂಟೆಗೆ ಬಂಗಾರಪೇಟೆಯ ಆರ್.ಆರ್ ಕಲ್ಯಾಣ ಮಂಠಪ, ಮಧ್ಯಾಹ್ನ 2-30 ಗಂಟೆಗೆ ಮಾಲೂರು ಪಟ್ಟಣದ ಶ್ರೀ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ, ಜೂ, 16ರ ಭಾನುವಾರ ಬೆಳಗ್ಗೆ 10-30 ಗಂಟೆಗೆ ಬೇತಮಂಗಲದ ಹೊಸ ಬಸ್ ನಿಲ್ದಾಣ ವೃತ್ತ, ಮಧ್ಯಾಹ್ನ 2-30 ಗಂಟೆಗೆ ಕೋಲಾರ ನಗರದ ಕೆ.ಇ.ಬಿ ಕಲ್ಯಾಣ ಮಂಠಪದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಬಿಜೆಪಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ ವೆಂಕಟಮುನಿಯಪ್ಪ ಕೋರಿದ್ದಾರೆ.