ಕೋಲಾರ ಪತ್ರಕರ್ತರ ಸಂಘದಿಂದ ಜುಲೈ 1ರಂದು ಪತ್ರಿಕಾ ದಿನಾಚರಣೆ ವಾರ್ಷಿಕ ಪ್ರಶಸ್ತಿಗಳ ಪ್ರಧಾನ – ಪ್ರತಿಭಾ ಪುರಸ್ಕಾರ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ ಪತ್ರಕರ್ತರ ಸಂಘದಿಂದ ಜುಲೈ 1ರಂದು ಪತ್ರಿಕಾ ದಿನಾಚರಣೆ ವಾರ್ಷಿಕ ಪ್ರಶಸ್ತಿಗಳ ಪ್ರಧಾನ – ಪ್ರತಿಭಾ ಪುರಸ್ಕಾರ

ಕೋಲಾರ: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 19ನೇ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಜುಲೈ 1ರಂದು ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ವಿ.ಮುನಿರಾಜು ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಸಂಘದ ವತಿಯಿಂದ ನೀಡಲಾಗುವ ಪ್ರಶಸ್ತಿಗಳು:
ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಮಾಲೂರಿನ ಹವ್ಯಾಸಿ ಪತ್ರಕರ್ತ ಜಾನ್‍ಆಲ್ಮೇಡ, ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ಸಂಜೆವಾಣಿ ಜಿಲ್ಲಾ ವರದಿಗಾರ ಕೆ.ಬಿ ಜಗದೀಶ್, ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ: ಕೋಲಾರ ಶಕ್ತಿ ಹೋಬಳಿ ವರದಿಗಾರ ಬೂದಿಕೋಟೆ ಬಿ.ಎನ್ ಸುದರ್ಶನ್,
ಎಂ.ಮಲ್ಲೇಶ್ ನೆನಪಿನಲ್ಲಿ: ಬಿ.ಟಿ.ವಿ ಮಾಧ್ಯಮ ಛಾಯಾಗ್ರಾಹಕ ಬಿ.ಅಮರನಾಥ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಶ್ರೀನಿವಾಸಪುರ ಇಂದು ಸಂಜೆ ತಾಲೂಕು ವರದಿಗಾರ ಎಂ.ನಾರಾಯಣಸ್ವಾಮಿ, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಟಿ.ವಿ.9 ಜಿಲ್ಲಾ ವರದಿಗಾರ ಬಿ.ಎಲ್.ರಾಜೇಂದ್ರಸಿಂಹ,
ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್‍ನ ತಮಿಳು ಮುರುಸು ಜಿಲ್ಲಾ ವರದಿಗಾರ ಎಸ್.ಭಾಸ್ಕರನ್, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ : ರಾಷ್ಟ್ರೀಯ ಸಹಾರಾ ಜಿಲ್ಲಾ ವರದಿಗಾರ ಜಹೀರ್‍ಆಲಂ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ : ವಿಜಯವಾಣಿ ಹೋಬಳಿ ವರದಿಗಾರ ವಿ.ಮುನಿಸ್ವಾಮಿಗೌಡ ಅವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಜುಲೈ 1 ರಂದು ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು. ಹಿರಿಯ ಪತ್ರಕರ್ತ
ದಿವಂಗತ ಎಂ.ಮಲ್ಲೇಶ್ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಅವರಿಂದ ಕಾರ್ಯಕ್ರಮ ಉದ್ಘಾಟನೆ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ರವರು ಅಧ್ಯಕ್ಷತೆ ವಹಿಸುವರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿಗಳಾದ ಕೃಷ್ಣಬೈರೇಗೌಡ ಅವರಿಂದ ಪ್ರಶಸ್ತಿ ವಿಜೇತರಿಗೆ ಪುರಸ್ಕಾರ, ಸಣ್ಣ ಕೈಗಾರಿಕಾ ಸಚಿವ ಹೆಚ್. ನಾಗೇಶ್ ಅವರಿಂದ ಗುರುತಿನ ಚೀಟಿ ವಿತರಣೆ, ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಅವರಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಾಸಕರಾದ ಕೆ.ಶ್ರೀನಿವಾಸಗೌಡ ಅವರಿಂದ ಕೈಪಿಡಿ ಬಿಡುಗಡೆ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‍ರೆಡ್ಡಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ಪತ್ರಕರ್ತರು ಆಗಮಿಸಲು ಸಂಘದ ಪ್ರಕಟಣೆ ಕೋರಿದೆ.