ಕೋಲಾರ : ದಲಿತ ಮುಖಂಡ ವಿಶ್ವನಾಥ್ ಕೊಲೆಗೆ ಯತ್ನ, ಮಚ್ಚಿನಿಂದ ಮಾರಣಾಂತಿಕ ದಾಳಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ದಲಿತ ಮುಖಂಡ ವಿಶ್ವನಾಥ್ ಕೊಲೆಗೆ ಯತ್ನ, ಮಚ್ಚಿನಿಂದ ಮಾರಣಾಂತಿಕ ದಾಳಿ


ಆರೋಪಿಗಳ ಮೇಲೆ ರೌಡಿ ಶೀಟರ್ ದಾಖಲಿಸಿ ಗಡೀಪಾರು ಮಾಡಲು ಒತ್ತಾಯ: ಕೆ.ಎಂ.ಸಂದೇಶ್
ಕೋಲಾರ: ಅಂಬೇಡ್ಕರ್ ಸೇವಾ ಸಮಿತಿ ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್ ಅವರ ಕೊಲೆಗೆ ಯತ್ನಿಸಿ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿದ ಘಟನೆ ಗೌನಿಪಲ್ಲಿ ಪೋಲಿಸ್ ಠಾಣಾ ವ್ಯಾಪ್ತಿಯ ತಿಮ್ಮಿನಪಲ್ಲಿ ಗ್ರಾಮದಲ್ಲಿ ನಡೆದಿದೆ.
ದಿನಾಂಕ: 22.06.2019 ರಂದು ರಾತ್ರಿ ತಿಮ್ಮಿನಪಲ್ಲಿಯ ವಿಶ್ವನಾಥ್ ಅವರ ಮನೆಯ ಮೇಲೆ ಅದೇ ಗ್ರಾಮದ ಸರ್ವಣಿಯರಾದ ಶಿವಾರೆಡ್ಡಿ, ಮಂಜುನಾಥ್ ರೆಡ್ಡಿ, ಚೌಡರೆಡ್ಡಿ ಹಾಗೂ ಶಂಕರಪ್ಪ ಎಂಬುವವರು ದಾಳಿ ನಡೆಸಿ ವಿಶ್ವನಾಥ್ ಅವರ ಮೇಲೆ ಮಚ್ಚಿನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ.
ಈ ವಿಚಾರವಾಗಿ ಗೌನಿಪಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಮೇಲೆ ರೌಡಿ ಶೀಟರ್ ದಾಖಲಿಸಿ ಗಡೀಪಾರು ಮಾಡಿ ಎಂದು ಒತ್ತಾಯಿಸಿ ಕೋಲಾರಿನಿಂದ ಶ್ರೀನಿವಾಸಪುರ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ತಿಳಿಸಿದ್ದಾರೆ.