ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಚಿತ್ರದುರ್ಗದ ಶ್ರೀ ಕುಮಾರೇಶ್ವರ ಕೃಪ ನಾಟಕ “ಚಿನ್ನದ ಗೊಂಬೆ”

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಚಿತ್ರದುರ್ಗದ ಶ್ರೀ ಕುಮಾರೇಶ್ವರ ಕೃಪ ನಾಟಕ “ಚಿನ್ನದ ಗೊಂಬೆ”

ಕೋಲಾರ,ಜೂ.29: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಚಿತ್ರದುರ್ಗದ ಶ್ರೀ ಕುಮಾರೇಶ್ವರ ಕೃಪ ನಾಟಕ ಸಂಘದ ಕಲಾವಿದರಿಂದ ಜುಲೈ 1 ರಂದು ಸೋಮವಾರ ಸಂಜೆ 6-00 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ “ಚಿನ್ನದ ಗೊಂಬೆ” ಉಚಿತ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಚಲನಚಿತ್ರ ಹಾಗೂ ಕಿರುತೆರೆ ನಟರಾದ ಹೆಚ್.ಬಿ ಓಬಳೇಶ್, ಬಿ.ಮಲ್ಲಿಕಾರ್ಜುನ, ಮಂಜುಳ ಓಬಳೇಶ್, ಚಲನಚಿತ್ರ ನಟಿ ರೇಖಾದಾಸ್, ಶಾಂತಲಾ, ಶೋಭಾರೈ, ಹೆಲನ್, ಜೂ.ರಾಜಕುಮಾರ್ ರವರು ನಾಟಕದಲ್ಲಿ ಅಭಿನಯಿಸಲಿದ್ದಾರೆ.
ಪತ್ರಿಕಾ ಮಿತ್ರರು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಆಸಕ್ತ ಕಲಾಭಿಮಾನಿಗಳು ಭಾಗವಹಿಸಿ ಪಾತ್ರಧಾರಿಗಳನ್ನು ಪ್ರೋತ್ಸಾಹಿಸುವಂತೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಆಹ್ವಾನ ಪತ್ರಿಕೆಯನ್ನು ಪ್ರಕಟಿಸುವಂತೆ ಕೋರಲಾಗಿದೆ.