ಕೋಲಾರ ಗ್ರಾಮಾಂತರ ಠಾಣಾ ಸರಹದ್ದಿನಲ್ಲಿ ಕುಖ್ಯಾತ ಬೈಕ್ ಕಳ್ಳನ ಬಂಧನ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಗ್ರಾಮಾಂತರ ಠಾಣಾ ಸರಹದ್ದಿನಲ್ಲಿ ಕುಖ್ಯಾತ ಬೈಕ್ ಕಳ್ಳನ ಬಂಧನ
ಕೋಲಾರ : ಕೋಲಾರ ಗ್ರಾಮಾಂತರ ಠಾಣಾ ಸರಹದ್ದಿನಲ್ಲಿ ಕಳವು ಪ್ರಕರಣಗಳು ತಡೆಗಟ್ಟುವ ಹಾಗೂ ಪತ್ತೆ ಮಾಡುವ ಸಲುವಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದು, ಸೆಪ್ಟೆಂಬರ್ 10 ರಂದು  ಅಪರಾಧ ಸಿಬ್ಬಂದಿಯವರು ಗಸ್ತಿನಲ್ಲಿದ್ದಾಗ ಕೋಲಾರ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮೇರಹಳ್ಳಿ ಬಳಿ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಅರೋಪಿಯಾದ ವೆಂಕಿತ್ ಕುಮಾರ್@ವ ವೆಂಕಿ (21) ಬಿನ್ ನಾರಾಯಣಸ್ವಾಮಿ, ಈತನು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಗೌರಿಪೇಟೆ 3 ನೇ ಕ್ರಾಸ್ ಚೀಟಿ ಲಕ್ಷಮ್ಮ ಅವರ ಮನೆಯಲ್ಲಿ ಬಾಡಿಗೆ  ವಾಸವಿದ್ದು, ಈತನ ಸ್ವಂತ ಊರು ಗಿರ್ನಹಳ್ಳಿ ಆಗಿದ್ದು, ಈ ಆರೋಪಿಯಿಂದ  65 ಸಾವಿರ ಬೆಲೆ ಬಾಳುವ ಒಂದು ಜುಪಿಟರ್ ದ್ವಿಚಕ್ರವಾಹನ ಮತ್ತು 35 ಸಾವಿರ ಬೆಲೆ ಬಾಳುವ ಹೆವಿ ಡ್ಯೂಡಿ, ಟಿವಿಎಸ್ ದ್ವಿಚಕ್ರವಾಹನವನ್ನು ಸೇರಿ ಒಟ್ಟು ಒಂದು ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.  
ಈ ದಾಳಿಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯಾದ ಖಾಸೀಂಖಾನ್, ಕೃಷ್ಣಮೂರ್ತಿ, ಅರುಣ್ ಕುಮಾರ್, ರಮೇಶ್ ಬಾಬು, ಮುನಿರಾಜು ಭಾಗವಹಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ತಿಳಿಸಿದ್ದಾರೆ.