ಕೊಂಕಣಿ ಸಾಹಿತ್ಯ ಕಲಾ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ – ಲುವೀಸ್ ಡಿಆಲ್ಮೇಡಾ

JANANUDI NETWORK

ಕೊಂಕಣಿ ಸಾಹಿತ್ಯ ಕಲಾ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ – ಲುವೀಸ್ ಡಿಆಲ್ಮೇಡಾ


ಕುಂದಾಪುರ, ಆ: ಉಡುಪಿ ಜಿಲ್ಲೆ ಸಾಹಿತ್ಯ ಕಲಾ ಮತ್ತು ಸಾಂಸ್ಕ್ರತಿಕ ಸಂಘಟನೇಯ ವಾರ್ಷಿಕ ಮಹಾಸಭೆಯು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಭಾ ಭವನದಲ್ಲಿ ಇತ್ತೀಚೆಗೆ ಜರಗಿತು. ಅಧ್ಯಕ್ಷರು ಸ್ವಾಗತಿಸಿದರು. ಸಭೆಯಲ್ಲಿ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಈ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದಿನ ಅಧ್ಯಕ್ಷ ಲುವಿಸ್ ಡಿಅಲ್ಮೇಡಾ, ಮಣಿಪಾಲ ಇವರು ಸರ್ವಾನು ಮತದಿಂದ 2019 20 ಸಾಲಿನ ಅಧ್ಯಕ್ಷರಾಗಿ ಪುನಾರಾಯ್ಕೆಯಾದರು.
ಗೊಡ್ಫ್ರಿ ಡಿಸೋಜಾ, ಉದ್ಯಾವರ ಉಪಾಧ್ಯಕ್ಷರಾಗಿ, ರೋಜಿ ಬಾರೆಟ್ಟೊ, ಕಲ್ಯಾಣಪುರ, ಕಾರ್ಯದರ್ಶಿಯಾಗಿ, ರೋಜಿ ಕ್ವಾಡ್ರಸ್, ಕಲ್ಯಾಣಪುರ, ಸಹಕಾರ್ಯದರ್ಶಿಯಾಗಿ. ಆಲ್ಫೋನ್ಸ್ ಡಿಕೋಸ್ತಾ, ಉಡುಪಿ, ಕೋಶಾಧಿಕಾರಿಯಾಗಿ. ಡಾ|ಜೆರಾಲ್ಡ್ ಪಿಂಟೊ, ಕಲ್ಯಾಣಪುರ. ಜೆಸಿಂತಾ ಕ್ವಾಡ್ರಸ್, ರಿಚಾರ್ಡ್ ಡಿಸೋಜಾ, ಆಂಟೋನಿ ಲುವಿಸ್, ಆಲ್ಫೊನ್ಸ್ ಡಿಸೋಜಾ, ಸ್ಟ್ಯಾನಿ ವಿನ್ಸೆಂಟ್ ರೊಡ್ರಿಗಸ್ ಇವರುಗಳು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಿ ಬಂದರು.
ಚುನಾವಣಾ ಪ್ರಕಿÅಯೆಯನ್ನು ನಿಕಟ ಪೂರ್ವ ಅಧ್ಯಕ್ಷ ಡಾ|ಜೆರಾಲ್ಡ್ ಪಿಂಟೊ ನಡೆಸಿಕೊಟ್ಟರು.