ಕೆ. ರಹಮತುಲ್ಲಾ ಸಾಹೇಬ್ ನಿಧನ

JANANUDI.COM NETWORK

 

 

ಕೆ. ರಹಮತುಲ್ಲಾ ಸಾಹೇಬ್ ನಿಧನ

 

ಕುಂದಾಪುರ : ಕುಂದಾಪುರ ತಾಲೂಕಿನ ಕಾವ್ರಾಡಿ ನಿವಾಸಿ ಕೆ. ರಹಮತುಲ್ಲಾ ಸಾಹೇಬ್(68) ಅವರು ದಿನಾಂಕ 30.01.2020 ಗುರುವಾರದಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೆನರಾ ಬ್ಯಾಂಕ್ ನ ಮಾಜಿ ಉದ್ಯೋಗಿಯಾಗಿದ್ದ ಅವರು ಕುಂದಾಪುರ, ಬೆಂಗಳೂರು, ಗಂಗೊಳ್ಳಿ, ನೇರಳಕಟ್ಟೆ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದರು. ಕಾವ್ರಾಡಿ ಜಾಮೀಯ ಮಸೀದಿಯ ಅದ್ಯಕ್ಷರಾಗಿಯೂ ಕಾರ್ಯ ನಿರ್ವಸುತ್ತಿದ್ದ ಅವರು ಸ್ಥಳೀಯವಾಗಿ ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ, ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನ ವಾರ್ತೆ ಕೇಳಿದೊಡನೆ ಜಾತಿ ಮತ ಬೇಧವಿಲ್ಲದೆ ಹಲವಾರು ಮಂದಿ ಆಗಮಿಸಿ ತಮ್ಮ ಅಶ್ರುತರ್ಪಣ ಸಲ್ಲಿಸಿದ್ದಾರೆ.