ಕುಂದಾಪ್ರ ಕನ್ನಡ ನಮ್ ಅಬ್ಬಿ ಇದ್ದಾಂಗೆ. ಅಬ್ಬಿ ಋಣ ಯಾವಾಗ್ಲೂ ತೀರ್ಸೋಕೆ ಆತಿಲ್ಲೆ,ವಿಶ್ವಕುಂದಾಪ್ರ ಕನ್ನಡ ದಿನ  “ಚಂದ್ಗೊಂಪಿ” ಕುಂದಾಪ್ರ ಕನ್ನಡ ಕಾರ್ಯಕ್ರಮದಲ್ : ಬಿ.ಅಪ್ಪಣ್ಣ ಹೆಗ್ಡೆ

JANANUDI.COM NETWORK

 

 

ಕುಂದಾಪುರ,”ಕುಂದಾಪ್ರ ಕನ್ನಡ ನಮ್ ಅಬ್ಬಿ ಇದ್ದಾಂಗೆ. ಅಬ್ಬಿ ಋಣ ಯಾವಾಗ್ಲೂ ತೀರ್ಸೋಕೆ ಆತಿಲ್ಲೆ. ಕುಂದಾಪ್ರ ಭಾಷಿ ಸಾವ್ರ ವರ್ಸದ ಗಟ್ಟಿ ಭಾಷೆ. ಈ ಭಾಷಿ ಒಗಟು, ಗಾದಿ, ಹಾಡ್, ಕುಣ್ತ ಜನಜೀವನ್‍ದೊಳಗೆ ಸೇರ್ಕಂಡೇ ಇತ್ತ್. ಊರಲ್ ಇರ್ಲಿ, ಪರಊರಲ್ ಇರ್ಲಿ ನಮ್ ಮಕ್ಳ್ ಕುಂದಾಪ್ರ ಭಾಷಿಯಲ್ಲೇ ಮಾತಾಡ್ಕ್ , ನಮ್ ಊರ್ ಸಂಸ್ಕøತಿ ಹೇಳಿಕೊಡ್ಕ” ಎಂದು ಮಾಜಿ ಶಾಸಕ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
“ಕುಂದಪ್ರಭ” ಸಂಸ್ಥೆ ವಿಶ್ವಕುಂದಾಪ್ರ ಕನ್ನಡ ದಿನ ಅಂಗವಾಗಿ ಜುಲಾಯ್ 20 ರಂದು “ಚಂದ್ಗೊಂಪಿ” ಕುಂದಾಪ್ರ ಕನ್ನಡ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ಹಲವು ರಾಜರ, ಬ್ರಿಟಿಷ್ , ಫ್ರೆಂಚ್, ಡಚರ್, ಪ್ರಭಾವವನ್ನು ಎದುರಿಸಿ ಉಳಿದು ಬೆಳೆದ ಈ ಕುಂದಾಪ್ರ ಕನ್ನಡ ತನ್ನದೇ ಶಬ್ದಗಳನ್ನು ಇತರ ಭಾಷೆಗಳಿಗೆ ನೀಡಿತೆ ವಿನಹ ಸೊರಗಲಿಲ್ಲ. ಇಂದೂ ನಮ್ಮ ಯುವಕರು ಸಂವಹನದ ಭಾಷಿಯಾಗಿ ಇದನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಅಭಿನಂದನಾರ್ಹವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಯು.ಎಸ್.ಶೆಣೈ ಮಾತನಾಡಿ” ಕೆಲವು ಮಂದಿ ಸಾಹಿತಿಗಳು, ಜಾನಪದ ಸಂಶೋಧಕರು, ಈ ಭಾಷೆಯ ಸೊಗಡು, ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಗಾದೆ, ಹಾಡು, ಒಗಟು , ಸಂಗ್ರಹಿಸಿದರು. ಕತೆಗಳಲ್ಲಿ ಕುಂದಕನ್ನಡ ತಂದರು. ಪುಸ್ತಕ ಪ್ರಕಟಿಸಿದರು. ಆದರೆ ಅವರಿಗೆ ಸರಿಯಾದ ಪ್ರೋತ್ಸಾಹ ಸಿಕ್ಕಿರಲಿಲ್ಲ. ಆದರೆ ಇಂದು ಕುಂದಾಪ್ರ ಕನ್ನಡ ಎಲ್ಲ ಕ್ಷೇತ್ರದಲ್ಲಿ ಪ್ರಯೋಗವಾಗುತ್ತಿದೆ. ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿದೆ ಎಂದರು.
ಅಂಕಣಗಾರ ಕೋ.ಶಿವಾನಂದ ಕಾರಂತ, ಕುಂದಕನ್ನಡ ದ್ರಾವಿಡ ಭಾಷೆಯ ಮೂಲದ್ದಾಗಿದ್ದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ವಿವರಿಸಿದರು. ಸಹಕಾರಿ ಧುರೀಣ ಎಸ್.ದಿನಕರ ಶೆಟ್ಟಿ ಕಾಳಾವರ, ಚಿತ್ರ ನಟ ನಿರ್ದೇಶಕ ರಾಜ್ ಬಲ್ಲಾಳ್ ಕುಂದಾಪ್ರ ಕನ್ನಡದ ಸೊಗಡನ್ನು ವಿವರಿಸಿದರು.
ಲೇಖಕ ಪಿ.ಜಯವಂತ ಪೈ, ಕೆ.ಜನಾರ್ಧನ್ ಶೆಣೈ ಕುಂದಾಪ್ರ ಕನ್ನಡ ಕವನ ವಾಚನ ಮಾಡಿದರು.
ಮದ್ದುಗುಡ್ಡೆ ವೆಂಕಟೇಶ ಪೈ ಹೊಯ್ಕ್‍ಬರ್ಕ್ ಪುಸ್ತಕ ಪ್ರಕಟಣೆಯ ಅನುಭವ ವಿವರಿಸಿದರು. ಹಂದಕುಂದ ಸೋಮಶೇಖರ ಶೆಟ್ಟಿ “ವಟಾವಟಾ ಅಂಬ್ಕೆ” ಗಾದೆಗಳು, ಒಗಟುಗಳನ್ನು ತಿಳಿಸಿದರು.
ಕಲಾವಿದ ಕೆ.ಕೆ.ರಾಮನ್ ಕುಂದಕನ್ನಡದಲ್ಲಿ ನಾಟಕದ ಸಂಭಾಷಣೆ ಹೇಳಿದರು. ಕವಿ ಡುಂಡಿರಾಜರ ಕುಂದಕನ್ನಡ ಕವಿತೆಗಳನ್ನು ವಾಚನ ಮಾಡಲಾಯಿತು.
ಕಾರ್ಯಕ್ರಮ ನಿರೂಪಿಸಿದ ಪ.ಪೂ.ಕಾಲೇಜು ಪ್ರಾಂಶುಪಾಲ ವಿಶ್ವನಾಥ ಕರಬ “ಕರುಹಾರ್ರು ತೊಡಮಿ ಕೆಳಗೆ” ಎಂಬ ಗಾದೆಯ ಅರ್ಥ ವಿವರಿಸಿದರು. ಸಂಗೀತ ಭಾರತಿ ಟ್ರಸ್ಟ್ (ರಿ) ಕಾರ್ಯದರ್ಶಿ ಕೆ. ನಾರಾಯಣ ವಂದಿಸಿದರು.