ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ವನಮಹತ್ಸೋವ

JANANUDI NETWORK

ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ವನಮಹತ್ಸೋವ

ಕುಂದಾಪುರ, ಜು.29: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಇವರ ಸಹಯೋಗದೊಂದಿಗೆಗೆ ವನಮಹತ್ಸೋವವನ್ನು ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೈಲೆಟ್ ತಾವ್ರೊ ಶುಭ ನುಡಿದರು.
     ಅತಿಥಿಗಳಾದ ರೋಟರಿ ರೀವರ್ ಸೈಡ್ ಕುಂದಾಪುರ ಅಧ್ಯಕ್ಷ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಇಂಟರ್ಯಾಕ್ಟ್ ಕ್ಲಬಿನ ವಿದ್ಯಾರ್ಥಿಗಳಿಗೆ ಗೀಡಗಳನ್ನು ವಿತರಿಸಿ ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿ ಮನೆಯಲ್ಲೂ ಗೀಡ ನೆಡುವ ಮೂಲಕ ಪ್ರಾಕÅತಿಕ ಸಮತೋಲನ ಕಂಡುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.
ರೊ| ಮಂಜುನಾಥ್ ಶೆಟ್ಟಿ, ರೊ| ಸುಜಯ್ ಸುವರ್ಣ್, ರೊ|ರೊನಾಲ್ಡ್ ಡಿಮೆಲ್ಲೊ, ರೊ|ಉಲ್ಲಾಸ್ ಕ್ರಾಸ್ತಾ ಮತ್ತು ಶಿಕ್ಷಕ, ಶಿಕ್ಷಕೇತರ ವ್ರಂದದವರು ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕ್ಲಬಿನ ಅಧ್ಯಕ್ಷೆ ರಂಜಿತಾ ಶೆಟ್ಟಿ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.