ಕುಂದಾಪುರ ವ್ಯಾಸರಾಜ ಮಠಕ್ಕೆ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ಭೇಟಿ

JANANUDI.COM NETWORK

 

 

ಕುಂದಾಪುರ ವ್ಯಾಸರಾಜ ಮಠಕ್ಕೆ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ಭೇಟಿ 

 

ಕುಂದಾಪುರ: ಗಾಣಿಗ ಸಮಾಜ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದರು ತಮ್ಮ ಮೂಲ ಮಠವಾದ ಕುಂದಾಪುರದ ವ್ಯಾಸರಾಜ ಮಠದ ಭೇಟಿ ನೀಡಿದರು.
ಗುರುವಾರದಿಂದ ಭಾನುವಾರದ ವರೆಗೆ ಶ್ರೀ ಮಠದಲ್ಲಿ ಚಿತ್ತೈಸಿದ ಶ್ರೀಗಳು ಭಿಕ್ಷೆ, ಪಾದುಕೆ ಪೂಜೆ, ಮುದ್ರಾ ಧಾರಣೆ, ಪ್ರವಚನ, ಮಹಾಪೂಜೆ ನಡೆಸಿದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ, ಭಜನೆ ಮುಂತಾದ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಗೌರವಾಧ್ಯಕ್ಷ ಕೆ.ಎಂ.ಲಕ್ಷ್ಮಣ, ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು, ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಮೋಡು, ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ ಕನ್ಯಾಣ, ಕೋಶಾಧಿಕಾರಿ ಗಣಪಯ್ಯ ಗಾಣಿಗ ಉಪ್ಪುಂದ ಹಾಗೂ ತಾಲೂಕು ಗಾಣಿಗ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.