ಕುಂದಾಪುರ ರೋಜರಿ ಮಾತ ಇಗರ್ಜಿಯಲ್ಲಿ: ಕ್ರೈಸ್ತ ಶಿಕ್ಷಣ ಪ್ರಾರಂಭತ್ಸೋವ

JANANUDI NETWORK

ಕುಂದಾಪುರ ರೋಜರಿ ಮಾತ ಇಗರ್ಜಿಯಲ್ಲಿ: ಕ್ರೈಸ್ತ ಶಿಕ್ಷಣ ಪ್ರಾರಂಭತ್ಸೋವ


ಕುಂದಾಪುರ, ಜೂ.9: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಪ್ರಾರಂಭತ್ಸೋವವ ಕಾರ್ಯಕ್ರಮ ಜೂನ್ 9 ರಂದು ಇಗರ್ಜಿಯಲ್ಲಿ ನೆಡೆಯಿತು. ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಹಾಗೂ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಇವರುಗಳು ದೀಪ ಬೆಳಗಿಸಿ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು.
‘ಏಸು ಕ್ರಿಸ್ತರು ಮರಣ ಹೊಂದಿ ಪುನರುತ್ಥಾನ ಹೊಂದಿ ಸ್ವರ್ಗ ರೋಹಣವಾದ ಮೇಲೆ, ಏಸು ಹೇಳಿದಂತೆ ಏಸುವಿನ ತಾಯಿ ಮೇರಿ ಮತ್ತು ಏಸುವಿನ ಶಿಸ್ಯರ ಮೇಲೆ ಪವಿತ್ರ ಆತ್ಮನ ಶಕ್ತಿ ಇಳಿದು ಅವರೆಲ್ಲಾ, ಕ್ರಿಸ್ತನ ಶುಭ ಸಂದೇಶವನ್ನು ಸಾರಲು ಪ್ರೇರಿತರಾಗುತ್ತಾರೆ, ಹಾಗೆ ನೀವು ಮಕ್ಕಳಿಗೆ ಕ್ರೈಸ್ತ ಶಿಕ್ಷಣ ನೀಡುವಾಗ ಅದೇ ಪವಿತ್ರ ಆತ್ಮವು ನಿಮ್ಮನ್ನು ಪವಿತ್ರ ಆತ್ಮವು ಶಕ್ತಿಯಿಂದ ಭರಿಸಲಿ, ಹಾಗೆ ನೀವು ಮಕ್ಕಳಿಗೆ ಏಸುವಿನ ತತ್ವ ಮೌಲ್ಯಗಳನ್ನು ಭೋದಿಸಿರಿ’ ಎಂದು ಅವರು ಸಂದೇಶ ನೀಡಿದರು.
ಈ ವೇಳೆ ಧರ್ಮಗುರುಗಳು ನೀತಿ ಪಾಠದ ಪುಸ್ತಕಗಳನ್ನು ಶಿಕ್ಷಕರಿಗೆ ಹಸ್ತಾಂತರಿಸಿದರು, ಮತ್ತು ಸಾಂಕೇತಿಕವಾಗಿ ನೀತಿ ಪಾಠದ ಸಲುವಾಗಿ ಮಕ್ಕಳನ್ನು ಶಿಕ್ಷಕಿಯರ ಕೈಗೆ ಹಸ್ತಾಂತರಿಸಲಾಯಿತು. ನೀತಿ ಶಿಕ್ಷಣ ನೀಡುವ ಇಗರ್ಜಿಯ ಎಲ್ಲಾ ಶಿಕ್ಷಕಿಯರು ಧರ್ಮಗುರು ಹಾಗೂ ಭಕ್ತಾಧಿಗಳ ಜೊತೆ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹೆತ್ತವರ ಪ್ರತಿನಿಧಿಯಾಗಿ ಲೋಯ್ ಮತ್ತು ಆಶಾ ಕರ್ವಾಲ್ಲೊ, ಶಿಕ್ಷಕಿಯರ ಪ್ರತಿನಿಧಿಯಾಗಿ ಪ್ರೀತಿ ಬ್ರಗಾಂಜಾ ಪಾಲ್ಗೊಂಡರು. ಶಿಕ್ಷಕಿ ಶಾಂತಿ ಬಾರೆಟ್ಟೊ ಕಾರ್ಯಕ್ರಮ ನಿರ್ವಹಿಸಿದರು.