ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ

ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ


ಕುಂದಾಪುರ, ಎ.19: ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿ, ಅದಕ್ಕು ಮುನ್ನು ಅವರಿಗೆ ಹೊಡೆದು ಬಡಿದು ಅವರ ಹೆಗಲಿಗೆ ಶಿಲುಭೆ ನೀಡಿ ಶಿಲುಭೆ ಯಾತ್ರೆ ಮಾಡಿಸಿದರು. ಈ ಶಿಲುಭೆ ಯಾತ್ರೆಯನ್ನು ಸ್ಮರಿಸಿ ಬೆಳಿಗ್ಗೆ ಪ್ರಧಾನ ಧರ್ಮಗುರು ಅ|ವ| ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ ಯೇಸುವಿನ ಕಷ್ಟ ಕಾರ್ಪಣ್ಯದ ಶಿಲುಭೆಯ ಯಾತ್ರೆಯನ್ನು ಚರ್ಚಿನ ಮೈದಾನದಲ್ಲಿ ಆಯಾಯ ವಾಳೆಗಳ ಸದಸ್ಯರ ಮತ್ತು ಯುವ ಸಂಘಟನೆಯ ಸದಸ್ಯರಿಂದ ನೆಡಸಲಾಯಿತು, ಈ ಶಿಲುಭೆಯ ಯಾತ್ರೆಯಲ್ಲಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವ| ರೋಯ್ ಲೋಬೊ, ಅನೇಕ ಧರ್ಮ ಭಗಿನಿಯರು, ಚರ್ಚ್ ಮಂಡಳಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.