ಕುಂದಾಪುರ ಕೆನರಾ ಬ್ಯಾಂಕ್‍ನಿಂದ ಗೃಹಸಾಲ ವಿತರಣೆ

JANANUDI.COM NETWORK

ಕೆನರಾ ಬ್ಯಾಂಕ್‍ನಿಂದ ಒಟ್ಟು 15 ಫಲಾನುಭವಿಗಳಿಗೆ ಗೃಹಸಾಲ ವಿತರಣಾ ಸಮಾರಂಭ ಸೆ.11 ರಂದು ಕುಂದಾಪುರದ ವಡೇರಹೋಬಳಿ ಶಾಖೆಯಲ್ಲಿ ಜರುಗಿತು. ಮಣಿಪಾಲ ಸರ್ಕಲ್ ಆಫೀಸಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್ ಭಕ್ತ ಸಾಲ ವಿತರಿಸಿ ಮಾತನಾಡುತ್ತ ಗ್ರಾಹಕರಿಗೆ ಬ್ಯಾಂಕ್‍ನಿಂದ ಸಿಗುವ ವಾಹನ ಸಾಲ, ಚಿನ್ನದ ಸಾಲ, ಶಿಕ್ಷಣ ಸಾಲ ಮುಂತಾದ ಸವಲತ್ತುಗಳ ಮಾಹಿತಿ ನೀಡಿದರು. ಉಡುಪಿ ರೀಜನಲ್ ಆಫೀಸ್ 2ರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರವಿಪ್ರಸಾದ್ ಭಟ್, ಡಿವಿಜನಲ್ ಮ್ಯಾನೇಜರ್ ರಾಜೇಶ್‍ಕರ್ ಹಾಗೂ ಕುಂದಾಪುರ ಶಾಖೆಯ ಚೀಫ್ ಮ್ಯಾನೇಜರ್ ಮಹೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಟೇಲ್ ಎಸೆಟ್ ಹಬ್‍ನ ಡಿವಿಜನಲ್ ಮ್ಯಾನೇಜರ್ ರತ್ನಾಕರ ಗಾಣಿಗ ಸ್ವಾಗತಿಸಿದರು.ವಡೇರಹೋಬಳಿ ಶಾಖೆಯ ಸೀನಿಯರ್ ಮ್ಯಾನೇಜರ್ ಜಗದೀಶ ಪೂಜಾರಿ ವಂದಿಸಿದರು.