ಕುಂದಾಪುರ ಬ್ಲಾಕ್  ಕಾಂಗ್ರೆಸ್ ವತಿಯಿಂದ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಅಕ್ಕಿ ವಿತರಣೆ

JANANUDI.COM NETWORK

 

ಕುಂದಾಪುರ ಬ್ಲಾಕ್  ಕಾಂಗ್ರೆಸ್ ವತಿಯಿಂದ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಅಕ್ಕಿ ವಿತರಣೆ

 

 

 

ಕುಂದಾಪುರ, ಎ.28: ಕುಂದಾಪುರ ಬ್ಲಾಕ್‍ನ 480 ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮ ಪಕ್ಷದ ನಾಯಕರ ಸೂಚನೆ ಮೇರೆಗೆ (28-04-2020) ನಡೆಸಲಾಯಿತು
ಮೊದಲ ಹಂತದಲ್ಲಿ ಸಾಂಕೇತಿವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆ, ಹಂಗಳೂರು ಮತ್ತು ಬಳ್ಕೂರು ಗ್ರಾಮ ಪಂಚಾಯತ್ ಪ್ರತುನಿಧಿಗಳಿಗೆ ಪಡಿತರವನ್ನು ಅರ್ಹ ಕುಟುಂಬಗಳಿಗೆ ತಲುಪಿಸಲಿಕ್ಕಾಗಿ ಹಸ್ತಾತಂತರಿಸಲಾಯಿತು. ಮುಂದಿನ ಹಂತದಲ್ಲಿ ಉಳಿದ ಪಂಚಾಯ್ತ್, ಸಂಘ ಸಂಸ್ಥೆ ಪಕ್ಷದ ಮುಖಂಡರುಗಳ ಮೂಲಕ ಅಕ್ಕಿಯನ್ನು ಹಂಚಲಾಗುವುದೆಂದು ತಿರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಮಾಜಿ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಗಳ ಉಪಾಧ್ಯಕ್ಷ ಮಾಣಿ ಗೋಪಾಲ್, ನಗರಧ್ಯಾಕ್ಷ ಗಣೇಶ ಸೇರುಗಾರ್, ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ, ಮಾಜಿ ಪುರಸಭಾ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ, ಟ್ಯಾಕ್ಷಿ ಮತ್ತು ವಾಹನ ಸಂಘದ ಅಧ್ಯಕ್ಷ ಲಕ್ಷಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಡ್ತಿ, ಅಶ್ಫಕ್, ದೇವಕಿ ಸಣ್ಣಯ್ಯ, ಅಬು ಮಹ್ಮದ್, ಕಾಂಗ್ರೆಸ್ ನಾಯಕರಾದ, ಸ್ಟೀವನ್ ಡಿಕೋಸ್ತಾ, ರೋಶನ್ ಬಾರೆಟ್ಟೊ, ದಿನೇಶ್ ಖಾರ್ವಿ, ಸದಾನಂದ ಖಾರ್ವಿ, ವೇಣುಗೋಪಾಲ, ಶ್ರೀನಿವಾಸ ಶೆಟ್ಟಿ, ಅರುಣ್ ಪಟೇಲ್, ನಾಗರಾಜ್ ನಾಯಕ್, ಅಶೋಕ ಸುವರ್ಣ, ರೋಶನ್ ಶೆಟ್ಟಿ, ನಿತೇಶ್ ಪಟೇಲ್. ಆನಂದ ಪೂಜಾರಿ ಉಪಸ್ಥಿತರಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.