ಕುಂದಾಪುರ ವಲಯ ಕಥೊಲಿಕ್ ಸಭಾದ ವಾರ್ಷಿಕ ಮನೋರಂಜನ ಕೂಟ

ಕುಂದಾಪುರ ವಲಯ ಕಥೊಲಿಕ್ ಸಭಾದ ವಾರ್ಷಿಕ ಮನೋರಂಜನ ಕೂಟ

ಕುಂದಾಪುರ, ಜ.21: ಕುಂದಾಪುರ ವಲಯ  ಕಥೊಲಿಕ್ ಸಭಾದ  ಪದಾಧಿಕಾರಿ ಮತ್ತು ಕುಟುಂಬಸ್ಥರ ವಾರ್ಷಿಕ ಮನೋರಂಜನ ಕೂಟವು ಆಶಿರ್ವಾದ್ ಸಭಾ ಭವನದಲ್ಲಿ ನೆಡೆಯಿತು. ಈ ಸಂದರ್ಬದಲ್ಲಿ ಕಿರು ಆಟಗಳು, ನಾನಾ ಥರಹದ ಸ್ಪರ್ಧೆಗಳು, ಗಾಯನ, ಹಾಸ್ಯ ಕಾರ್ಯಕ್ರಮಗಳು ನೆಡೆದ್ವು, ವಿಜೇತರಿಗೆ ಬಹುಮಾನಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷ ಮೈಕಲ್ ಪಿಂಟೊ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಕ್ವಾಡರ್ಸ್, ಕಥೊಲಿಕ್ ಸಭಾದ ಧುರೀಣರಾದ ಕಿರಣ್ ಕ್ರಾಸ್ತಾ, ಹೆರಿಕ್ ಗೊನ್ಸಾಲ್ವಿಸ್, ವಾಲೇರಿಯನ್ ಮಿನೇಜಸ್, ಸೋನಿ ಡಿಕೋಸ್ತಾ, ವಲಯ ಕಥೊಲಿಕ್ ಸಭಾದ ಪದಾಧಿಕಾರಿಗಳಾದ, ಮೇಬಲ್ ಡಿಸೋಜಾ, ಆರ್ಚಿಬಾಲ್ಡ್ ಕ್ವಾಡರ್ಸ್, ವಿಲ್ಫ್ರೆಡ್ ಮಿನೇಜಸ್, ವಿನೋದ್ ಕ್ರಾಸ್ತಾ, ಎಲ್ಟನ್ ರೆಬೇರೊ, ವಾಲ್ಟರ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಡಿಆಲ್ಮೇಡಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು, ವಲಯ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು.