ಕುಂದಾಪುರ: ಇಲ್ಲಿನ ಪ್ರತಿಷ್ಟಿತ ಭಂಡಾರ್ಕಾರ್ಸ್‍ಕಾಲೇಜಿನ ವಾರ್ಷಿಕೋತ್ಸವವು ದಿನಾಂಕ 31 ಜನೆವರಿ 2020 ರಂದು ನಡೆಯಲಿದೆ.

JANANUDI.COM NETWORK

 

ಕುಂದಾಪುರ: ಇಲ್ಲಿನ ಪ್ರತಿಷ್ಟಿತ ಭಂಡಾರ್ಕಾರ್ಸ್‍ಕಾಲೇಜಿನ ವಾರ್ಷಿಕೋತ್ಸವವು ದಿನಾಂಕ 31 ಜನೆವರಿ 2020 ರಂದು ನಡೆಯಲಿದೆ. 

 

 

ದಿನಾಂಕ 31 ಜನೆವರಿ 2020 ರಂದು ನಡೆಯಲಿರುವಕಾಲೇಜಿನ ವಾರ್ಷಿಕೋತ್ಸವದ ಮುಖ್ಯಅತಿಥಿಯಾಗಿಕರ್ನಾಟಕಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ಡಾ. ಕೆ.ಚೆನ್ನಪ್ಪಗೌಡಆಗಮಿಸಲಿದ್ದಾರೆ. ಭಂಡಾರ್ಕಾರ್ಸ್‍ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀ ಶಾಂತಾರಾಂ. ಎ.ಭಂಡಾರ್ಕಾರ್‍ಅವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಭಂಡಾರ್ಕಾರ್ಸ್‍ಕಾಲೇಜಿನಆಡಳಿತ ಮಂಡಳಿಯ ಅಧ್ಯಕ್ಷರಾದಡಾ. ಹೆಚ್. ಶಾಂತಾರಾಂಅವರು ಉಪಸ್ಥಿತರಿರುವರು ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂದು ಮಧ್ಯಾಹ್ನಯಾರೆಆದ್ರೂ ಬಿಡುವಿಲ್ಲ ನಾಟಕ ಮತ್ತು ಸತ್ವ ಪರೀಕ್ಷೆ ಎಂಬ ಯಕ್ಷಗಾನ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ ಪೆಬ್ರುವರಿ 1ರಂದು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಅಂದುಬಹುಮಾನಗಳ ವಿತರಣಾಕಾರ್ಯಕ್ರಮ ನಡೆಯಲಿದ್ದುರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ ಮರಾಕಲ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ
ಪೆಬ್ರುವರಿ 2ರಂದು ಮದ್ಯಾಹ್ನ 2.30ಕ್ಕೆ “ಪ್ರಾಕ್ತನ ವಿದ್ಯಾರ್ಥಿಗಳ ಸಮಾವೇಶ” ನಡೆಯಲಿದೆಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.