ಕುಂದಾಪುರದ ಸಿನೆಮಾ ನಿರ್ಮಾಪಕನ ಆತ್ಮಹತ್ಯೆ

JANANUDI.COM NETWORK

 

[ಚಲನಚಿತ್ರಕ್ಕೆ 28  ಲಕ್ಷ ರೂಪಾಯಿ ಹೂಡಿದ್ದರು, ಹೂಡಿದ ಹಣ ವಾಪಾಸ್  ಸಿಗದ ಕಾರಣ  ಮಾನಸಿಕವಾಗಿ ನೊಂದಿದ್ದರು]

 

 

ಕುಂದಾಪುರ, ಜು.12 : ‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ  ನಿರ್ದೇಶಿಸಿದ  ಚಲನಚಿತ್ರಕ್ಕೆ 28  ಲಕ್ಷ ರೂಪಾಯಿ ಹೂಡಿದ್ದ ನಾಗೇಶ್ ಕುಮಾರ್  ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದರು. ಸಿನೆಮಾಕ್ಕೆ ಹೂಡಿದ ಹಣ ವಾಪಾಸ್  ಸಿಗದ ಕಾರಣ  ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ  ಆತ್ಮಹತ್ಯೆಗೈದಿದ್ದಾರೆಂದು ಅನುಮಾನ ಪಡಲಾಗಿದೆ

 ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66  ಪಕ್ಕದ ಲಕ್ಷ್ಮೀ ಗ್ಲಾಸ್ ಫ್ಲೈವುಡ್ ಅಂಗಡಿ ಹೊರಗಡೆ ಮಾಡಿನ ಕಬ್ಬಿಣದ ಪಟ್ಟಿಗೆ ಹಗ್ಗ ಕಟ್ಟಿಕೊಂಡು  ಕುತ್ತಿಗೆಗೆ ನೇಣು ಹಾಕಿಕೊಂಡು ನಾಗೇಶ್ ಕುಮಾರ್ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಅವರಿಗೆ 64 ಪ್ರಾಯ ವಯಸಾಗಿತ್ತು

‘ನನ್ನನ್ನು  ಕ್ಷಮಿಸಿ. ಎಲ್ಲರಿಗೂ ಒಳ್ಳೆಯದಾಗಲಿ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಡೆತ್  ನೋಟ್ ಬರೆದಿಟ್ಟಿದ್ದಾರೆ. ಈ ಬಗ್ಗೆ ಅವರ ಕುಟುಂಬದವರು. ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲು ಮಾಡಿಕೊಂಡಿದ್ದಾರೆ.