ಕುಂದಾಪುರದಲ್ಲಿ ಇಂಧನ ಉಳಿಸಿ, ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ ಸೈಕಲೋಥನ್ ರ್‍ಯಾಲಿ

JANANUDI.COM NETWORK

 

ಕುಂದಾಪುರದಲ್ಲಿ ಇಂಧನ ಉಳಿಸಿ, ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ ಸೈಕಲೋಥನ್  ರ್‍ಯಾಲಿ

 

 

ಕುಂದಾಪುರ ಸೈಕ್ಲಿಂಗ್ ಕ್ಲಬ್, ಜೆಸಿಐ ಕುಂದಾಪುರ ಸಿಟಿ , ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಇವರು ಆಯೋಜಿಸಿದ ಹಾಗೂ ಆಂಜನೇಯ ಗ್ಯಾಸ್ ಏಜೆನ್ಸಿ ಕುಂದಾಪುರ , ಸಂಗೀತ ಮೊಬೈಲ್ಸ್ ,ಶ್ರೀ ಗಜಾನನ ಸೈಕಲ್ ಸ್ಟೋರ್ಸ್ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ಇಂಧನ ಉಳಿಸಿ ,ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ cyclothon 2020 rally ಕುಂದಾಪುರದಲ್ಲಿ ನಡೆಯಿತು ಇನ್ನೂರಕ್ಕೂ ಹೆಚ್ಚು ಮಕ್ಕಳು ಹಾಗೂ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಬೆಳಿಗ್ಗೆ 7:00 ಗೆ ಶಾಸ್ತ್ರಿ ಸರ್ಕಲ್ ಇಂದ ಪ್ರಾರಂಭಗೊಂಡು 15 km cyclothon ಚರ್ಚ್ ರೋಡ್ ಮುಖೇನ ಕೋಡಿ ಕಡಲ ಕಿನಾರೆ ಮೂಲಕ ಪುನಹ ಕುಂದಾಪುರದ ಬೋರ್ಡ್ ಹೈಸ್ಕೂಲ್ ವಟಾರದಲ್ಲಿ ಮುಕ್ತಾಯಗೊಂಡಿತು ಮಕ್ಕಳಿಗೆ ಹಾಗೂ ನಾಗರಿಕರಿಗೆ ಇಂಧನ ಉಳಿತಾಯ ನೀರಿನ ಉಳಿತಾಯ ಪ್ಲಾಸ್ಟಿಕ್ ಬಳಕೆಯ ನಿಷೇಧ ಹಾಗೂ ಸ್ವಚ್ಛತೆಯ ಬಗ್ಗೆ ಪ್ರಮಾಣವಚನವನ್ನು ಬೋಧಿಸಲಾಯಿತು ನಂತರ ನಡೆದ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹೊಸ ಸೈಕಲ್ಲನ್ನು ನೀಡಲಾಯಿತು ಪಾಲ್ಗೊಂಡ ಎಲ್ಲರಿಗೂ ಉಪಹಾರ ಹಾಗೂ ಲಘುಪಾನೀಯ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರು ಹಾಗೂ ಸದಸ್ಯರು ಕ್ಲಿನ್ ಕುಂದಾಪುರ ಪ್ರಾಜೆಕ್ಟ್ ಇದರ ಪದಾಧಿಕಾರಿಗಳು ಇಂಡಿಯನ್ ಆಯಿಲ್ ಇದರ ಆಫೀಸರ್ ಆದ ಶ್ರೀ ರಾಜ, ಸಂಗೀತ ಮೊಬೈಲ್ಸ್ ಮ್ಯಾನೇಜರ್ ಆದ ಶ್ರೀ ಗೋಪಾಲಕೃಷ್ಣ ಹೆಗಡೆ, ಶ್ರೀ ಗಜಾನನ ಸೈಕಲ್ ಸ್ಟೋರ್ಸ್ ನ ಮಾಲಕರಾದ ಶ್ರೀ ದೀಪಕ್ ಉಪಸ್ಥಿತರಿದ್ದರು ಇಂಡಿಯನ್ ಸೈಕ್ಲಿಂಗ್ ಕ್ಲಬ್ ಇದರ ಸದಸ್ಯರಾದ ಡಾಕ್ಟರ್ ಗುರುರಾಜ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.