ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಆಡಳಿತ ಮಾಡಿದ್ದರೆ, ಬಿಜೆಪಿ ಸುಳ್ಳು ಪ್ರಚಾರಗಳ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ: -ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ -ವಿನಯ್ ಕುಮಾರ್ ಸೊರಕೆ 

ವರದಿ: ಚಂದ್ರಶೇಖರ ಶೆಟ್ಟಿ

ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಆಡಳಿತ ಮಾಡಿದ್ದರೆ, ಬಿಜೆಪಿ ಸುಳ್ಳು ಪ್ರಚಾರಗಳ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ: -ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ -ವಿನಯ್ ಕುಮಾರ್ ಸೊರಕೆ 

“ಕೋಟದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕರ ಮನೆಯ ಸಮೀಪದಲ್ಲಿಯೇ ಜೋಡಿ ಕೊಲೆಯಾಗಿದ್ದರೂ ಅದೇಕೆ ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ?. ಪುತ್ತೂರಿನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಂಸದೆ ಶೋಭಾ ಕರಂದ್ಲಾಜೆ, ನಳೀನ್‌ಕುಮಾರ ಕಟೀಲ್, ಸ್ಥಳೀಯ ಬಿಜೆಪಿ ಶಾಸಕರು ಯಾವುದೆ ಹೇಳಿಕೆ ನೀಡದೆ ಇರಲು ಕಾರಣವೇನು.? ಏಕೆಂದರೆ ಕೋಟಾದ ಜೋಡಿ ಕೊಲೆಯಲ್ಲಿ ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯನೆ ಕೊಲೆಗಾರನಾಗಿದ್ದಾನೆ ಮತ್ತು ಪುತ್ತೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಬೆಂಬಲಿತ ವಿಧ್ಯಾರ್ಥಿ ಸಂಘಟನೆ ಎಬಿವಿಪಿಯ ಸದಸ್ಯರು ಜೈಲು ಪಾಲಾಗಿದ್ದಾರೆ. ಹಾಗಾಗಿ ಇವರುಗಳು ತುಟಿ ಬಿಚ್ಚುತ್ತಿಲ್ಲ “ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. 

ಕುಂದಾಪುರದ ಈಸ್ಟ್ ವೆಸ್ಟ್ ಕ್ಲಬ್‌ನಲ್ಲಿ ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

“ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆಗಳನ್ನು ಮರೆತಿರುವ ಬಿಜೆಪಿ ಪಕ್ಷ, ಜನರ ಭಾವನೆಗಳೊಂದಿಗೆ ಆಟ ಆಡುತ್ತಿದೆ. ಸೇನೆಯ ಸಾಧನೆಗಳನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದೆ. ಪುಲ್ವಾಮ ದಾಳಿಯನ್ನೆ ಚುನಾವಣಾ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿಯಿಂದ ಆಯ್ಕೆಯಾದ 303 ಸಂಸದರಲ್ಲಿ ಒಬ್ಬರೇ ಒಬ್ಬ ಅಲ್ಪಸಂಖ್ಯಾತರಿಲ್ಲ, ರಾಜ್ಯದಿಂದ ಆಯ್ಕೆಯಾದ 25 ಸಂಸದರಲ್ಲಿ ಒಬ್ಬರೂ ಹಿಂದುಳಿದ ವರ್ಗಕ್ಕೆ ಸೇರಿದವರಿಲ್ಲ ಎಂದು ಬೊಟ್ಟು ಮಾಡಿದ ಅವರು, ಆದರೂ ಬಿಜೆಪಿ ದೇಶಕ್ಕೆ ಸಬ್ ಕಾ ಸಾಥ್ ಸಭ್  ಕಾ ವಿಕಾಸ್, ಎಂಬ  ಸಾಮಾಜಿಕ ನ್ಯಾಯವನ್ನು ಭೋದಿಸುತ್ತಿದೆ ಎಂದು ಲೇವಡಿ ಮಾಡಿದರು.”

“ಇತ್ತೀಚಿನ ಚುನಾವಣಾ ಫಲಿತಾಂಶ ತಾತ್ಕಾಲಿಕವಾಗಿ ಕಾಂಗ್ರೆಸ್‌ಗೆ ಹಿನ್ನಡೆಯನ್ನು ಉಂಟು ಮಾಡಿದೆ. ಹಿಂದೆ ಅನೇಕ ಸಂದರ್ಭದಲ್ಲಿ ಕಾಂಗ್ರೆಸ್ ಈ ಸ್ಥಿತಿಗಳನ್ನು ಮೀರಿ ಎದ್ದು ನಿಂತ ಸಾಕಷ್ಟು ಉದಾಹರಣೆಗಳಿವೆ. ಪಕ್ಷವನ್ನು ತಳ ಮಟ್ಟದಿಂದ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿ ಯುವ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು ಎನ್ನುವ ಚಿಂತನೆಗಳನ್ನು ಪಕ್ಷ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಲ್ಲಿದ್ದ ದಿನಗಳಲ್ಲಿ ಸಾಕಷ್ಟು ಸರ್ಜಿಕಲ್ ಸ್ಟ್ರೈಕ್ಸ್‌ಗಳು ನಡೆದಿದ್ದರೂ, ಯಾವ ಸಂದರ್ಭದಲ್ಲಿಯೂ ಕಾಂಗ್ರೆಸ್ ಅದನ್ನು ತನ್ನ ಚುನಾವಣಾ ಉದ್ದೇಶಗಳಿಗಾಗಿ ಬಳಸಿಕೊಂಡಿಲ್ಲ ಎಂದು ಹೇಳಿದ ಅವರು ಅಭಿವೃದ್ಧಿಗಳನ್ನು ಮಾಡಿ ದೇಶ ಕಟ್ಟುವ ಪ್ರಯತ್ನ ಮಾಡಿದ್ದ ಕಾಂಗ್ರೆಸ್ ಮತ್ತೆ ಪುಟಿದೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದರು”.

ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆಎಂಎಫ್ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಮಾಣಿಗೋಪಾಲ, ಕಾಂಗ್ರೆಸ್ ಐಟಿ ಸೆಲ್‌ ರಾಜ್ಯ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷ ಸನ್ಮತ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಪ್ರಭಾವತಿ ಶೆಟ್ಟಿ, ಅಬ್ಬು ಮಹಮ್ಮದ್, ಅಶ್ಫಾಕ್ ಕೋಡಿ, ಲಕ್ಷ್ನೀ ಪೂಜಾರ್ತಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಬಿ.ಹಿರಿಯಣ್ಣ, ಇಸ್ಮಾಯಿಲ್ ಅತ್ರಾಡಿ, ಎಸ್.ರಾಜೂ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದೇವಾನಂದ ಶೆಟ್ಟಿ, ಸಂತೋಷ್‌ಕುಮಾರ ಶೆಟ್ಟಿ ಹಕ್ಲಾಡಿ, ತಿಮ್ಮ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರದೀಪ್‌ಕುಮಾರ ಶೆಟ್ಟಿ ಕಾವ್ರಾಡಿ, ಮದನ್‌ಕುಮಾರ ಉಪ್ಪುಂದ, ಶಂಕರ ಕುಂದರ್, ಪಕ್ಷದ ಪ್ರಮುಖರಾದ ಮುಸ್ತಾಕ್ ಅಹಮ್ಮದ್ ಬೆಳ್ವೆ, ಮಹೇಶ್ ಹೆಗ್ಡೆ ಮೊಳಹಳ್ಳಿ, ಜಯರಾಮ್ ಶೆಟ್ಟಿ ಬೆಳ್ವೆ, ಜ್ಯೋತಿ ವಿ ಪುತ್ರನ್, ಸಂಪಿಗೇಡಿ ಸಂಜೀವ ಶೆಟ್ಟಿ, ಕೃಷ್ಣದೇವ್ ಕಾರಂತ್, ಬಿ.ಹಾರೂನ್ ಸಾಹೇಬ್, ಸತೀಶ್ ಕಿಣಿ ಬೆಳ್ವೆ, ಗಣೇಶ್ ಶೇರುಗಾರ, ಕೃಷ್ಣ ಪೂಜಾರಿ ಅಮಾಸೆಬೈಲ್, ಅನಂತಪದ್ಮನಾಭ ಚಾತ್ರ ಇದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ ಕ್ರಾಸ್ಟೊ ಸ್ವಾಗತಿಸಿದರು, ಇನ್ನೋರ್ವ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಪ್ರಾಸ್ತಾವಿಕ  ಮಾತುಗಳನ್ನು ಹೇಳಿದರು, ಸೂರ್ಯಪ್ರಕಾಶ ದಾಂಬ್ಳಿ ವಂದಿಸಿದರು, ಪ್ರಸನ್ನಕುಮಾರ ಶೆಟ್ಟಿ ಕೆರಾಡಿ ನಿರೂಪಿಸಿದರು.