ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೋಲಾರ ಜಿಲ್ಲಾ ಉಪಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ನೇಮಕ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೋಲಾರ ಜಿಲ್ಲಾ ಉಪಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ನೇಮಕ 

 

ಕೋಲಾರ ನ. 25 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೋಲಾರ ಜಿಲ್ಲಾ ಉಪಾಧ್ಯಕ್ಷರಾಗಿ ಜಿ.ಶ್ರೀನಿವಾಸ್ ನೇಮಕಗೊಂಡಿದ್ಧಾರೆ.
ನಗರದ ಸರ್ಕಾರಿ ನೌಕರರ ಭವನದಲ್ಲಿ ಇಂದು ನಡೆದ ಸಭೆಯಲ್ಲಿ ಈ ನೇಮಕ ಪತ್ರವನ್ನು ಜಿಲ್ಲಾಧ್ಯಕ್ಷ ಕೆಬಿ ಅಶೋಕ್ ವಿತರಿಸಿದರು
ಜಿ.ವಿ.ಶ್ರೀನಿವಾಸ ಗೌಡ ಜಂಟಿ ಕಾರ್ಯದರ್ಶಿಯಾಗಿ ,ಕೆ ನಾಗೇಶ್ ಗೌಡ ಸಂಘಟನಾ ಕಾರ್ಯದರ್ಶಿಯಾಗಿ ,ಕೆಎಂ ರವಿಚಂದ್ರ ನಾಯ್ಡು ಸಂಘಟನಾ ಕಾರ್ಯದರ್ಶಿಯಾಗಿ ,ಬಿ.ಎಂ ಜಗನ್ನಾಥ್ ಹಾಗೂ ಕೆ.ಟಿ ನಾಗರಾಜ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡು ನೇಮಕಾತಿ ಪತ್ರ ಪಡೆದುಕೊಂಡರು .
ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಬಿ. ಅಶೋಕ್ ಸಂಘಟನೆಯನ್ನು ಅಸ್ತ್ರ ಮಾಡಿಕೊಂಡು ನೌಕರರ ಸಮಸ್ಯೆಗಳ ಈಡೇರಿಕೆಗೆ ಸಂಘಟನೆಯನ್ನು ಬೆಳೆಸಬೇಕು ಎಂದು ತಿಳಿಸಿದರು .
ಗೌರವಾಧ್ಯಕ್ಷ ಆರ್ ಅನಿಲ್ ಕುಮಾರ್ ಪ್ರಧಾನ ಕಾರ್ಯದರ್ಶಿ ಮುರಳಿ ಮೋಹನ್ ಮುಖಂಡರುಗಳಾದ ಆರ್ ಶ್ರೀನಿವಾಸನ್ ಉಪಾಧ್ಯಕ್ಷ ಬಂಗವಾದಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.