ಕಥೋಲಿಕ್ ಸಭಾ ಪಿಯುಸ್ ನಗರ್, ಹಂಗ್ಳೂರು ಘಟಕದಿಂದ ಗಾಂಧಿ ಜಯಂತಿಯಂದು  ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನ

ವರದಿ: ವಿಲ್ಪ್ರೆಡ್ ಮಿನೇಜೆಸ್

ಕಥೋಲಿಕ್ ಸಭಾ ಪಿಯುಸ್ ನಗರ್, ಹಂಗ್ಳೂರು ಘಟಕದಿಂದ ಗಾಂಧಿ ಜಯಂತಿಯಂದು  ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನ

ಕುಂದಾಪುರ,ಒ.೪. ಕಥೋಲಿಕ್   ಸಭಾ ಪಿಯುಸ್ ನಗರ್, ಹಂಗ್ಲೂರು, ಕುಂದಾಪುರದವರು ಇಂದು ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಕುಂದಾಪುರ ಕೊಡಿ ಸಮುದ್ರ ತೀರವನ್ನು ಸ್ವಚ್ಛ ಗೋಳಿಸುವ ಮೂಲಕ ನೇರವೇರಿಸಿದರು. ನಿರ್ಮಲ ಪರಿಸರ ನಮ್ಮ ಕರ್ತವ್ಯವೆನ್ನುವ ಧೇಯವನ್ನು ಪರಿಸರ ನಿವಾಸಿಗರಿಗೆ ನೀಡಿದರು.

ಕಥೋಲಿಕ್ ಸಭಾ ಪಿಯುಸ್ ನಗರದ ಅಧ್ಯಕ್ಷರಾದ ವಿಲ್ಫ್ರೆಡ್ ಮಿನೇಜಸ್ ರ ಸಮಾಕ್ಷದಲ್ಲಿ ಅಭಿಯಾನ ನಡೆಯಿತು. ಕುಂದಾಪುರ ವಲಯ ಕಾರ್ಯದರ್ಶಿಗಳಾದ ಲೀನಾ ತಾವ್ರೂ, ಇರ್ಗಜಿಯಾ ಉಪಾಧ್ಯಕ್ಷರಾದ ವಾಲ್ಟರ್ ಫೆರ್ನಾಂಡಿಸ್ ಹಾಗೂ ಲಯನ್ಸ್ ಕ್ಲಬ್, ಹಂಗಳೂರಿನ ಪದಾಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜಾ, ಆರ್ಚಿಬೊಲ್ಡ್ ಕ್ವಾಡ್ರಸ್, ಸ್ಟಾನಿ ಡಿಮೆಲ್ಲೊ ಹಾಗೂ ರೋಟರಿ ಕ್ಲಬ್ ಕುಂದಾಪುರದ ಸ್ಟಾನಿ ಡಿಸೋಜಾ ಹಾಗೂ ICYM ಅಧ್ಯಕ್ಷರಾದ ಜೆಸನ್ ಡಿ ಸೋಜಾ ಹಾಜರಿದ್ದರು.

ನಿಯೊಜಿತ್ ಅಧ್ಯಕ್ಷರಾದ ನ್ಯಾನ್ಸಿ ವಾಜ್ ಕಾರ್ಯಕ್ರಮ ನೇರವೇರಿಸಿದರು. ಕಥೋಲಿಕ್ ಸ್ತ್ರೀ ಸಂಘಟನ್ ಉಡುಪಿಯ ಕೇಂದ್ರೀಯ ಅಧ್ಯಕ್ಷರಾದ ಪ್ರೆಮಿಲ ಡೆಸಾರವರು ಧನ್ಯವಾದ ಅರ್ಪಿಸಿದರು.