ಕಥೊಲಿಕ್ ಸಭಾ ಕುಂದಾಪುರ ವಲಯ, ಶೆವೊಟ್ ಪ್ರತಿಷ್ಟಾನ್ ನಿಂದ 7 ನೇ ರ‍್ಯಾಂಕ್ ಮುಸ್ಕಾನಗೆ ಸನ್ಮಾನ

JANANUDI.COM NETWORK

 

ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ)  ಕುಂದಾಪುರ್ ವಾರಾಡೊ ಸಮಿತಿ ಆಶ್ರಯದಲ್ಲಿ 2019-20 ರ ಸಾಲಿನ  ಪಿಯುಸಿ   ಅಂತಿಮ ಪರೀಕ್ಷೆಯಲ್ಲಿ  ಕಾಮರ್ಸ್ ವಿಭಾಗಾದಲ್ಲಿ  98.5% ಅಂಕ ಪಡೆದು ರಾಜ್ಯದಲ್ಲಿ  7 ನೇ  ರ‍್ಯಾಂಕ್,ಜಿಲ್ಲೆಯಲ್ಲಿ ೩ ನೆ  ರ‍್ಯಾಂಕ್   ಪಡೆದ ತೌಹೀಧ್ ಹೆಣ್ಣು ಮಕ್ಕಳ ಪದವಿ ಪೂರ್ವ   ಕಾಲೇಜಿನ ವಿದ್ಯಾರ್ಥಿ ಗಂಗೊಳ್ಳಿಯ   ಮುದಾಸಿರ್ ಎಮ್ ಎಫ್ ಮತ್ತು ಆಸ್ಮಾ  ದಪಂತಿಯ ಪುತ್ರಿ   ಮುಸ್ಕಾನ್ ಎಮ್ ಎಫ್ ನಳನ್ನು  ಕಥೊಲಿಕ್ ಸಭಾ ಮತ್ತು ಶೆವೊಟ್ ಪ್ರತಿಷ್ಟಾನ್ (ರಿ) ಕುಂದಾಪುರ ಇದರ ವತಿಯಿಂದ್ ಅಗಸ್ಟ್ 1 ರಂದು ಇವರ ಮನೆಗೆ  ತೆರಳಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು

ಶೆವೊಟ್ ಪ್ರತಿಷ್ಟಾನ್ (ರಿ) ಕುಂದಾಪುರ  ಮಾಜಿ   ಕಾರ್ಯದರ್ಶಿ , ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ)  ಮಾಜಿ ಅಧ್ಯಕ್ಷ  ಎಲ್ರೊಯ್ ಕಿರನ್  ಕ್ರಾಸ್ಟಾ ಅಭಿನಂದನ ಮಾತುಗಳನ್ನಾಡಿದರು. ಕುಂದಾಪುರ ವಲಯ ಕಥೊಲಿಕ್ ಸಭಾ ಮತ್ತು ಘಟಕದ ಪದಾಧಿಕಾರಿಗಳು ಮುಸ್ಕಾನಾಳನ್ನು ಶಾಲು ಹೂ ಹಣ್ಣು,ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.   

 ಈ ಸಂದರ್ಭದಲ್ಲಿ  ಕಥೊಲಿಕ್ ಸಭಾ ಕುಂದಾಪುರ ವಲಯದ  ಅಧ್ಯಕ್ಷೆ  ಮೇಬಲ್ ಡಿಸೋಜ, ಕಾರ್ಯದರ್ಶಿ ಮೆಲ್ವಿನ್ ಫುರ್ಟಾಡೊ, ಕೋಶಾಧಿಕಾರಿ ಮೈಕಲ್ ಪಿಂಟೊ. ಗಂಗೊಳ್ಳಿ ಘಟಕದ ಅಧ್ಯಕ್ಷ ರೋಶನ್ ಲೋಬೊ, ಕಾರ್ಯದರ್ಶಿ ಸೆಲಿನ್ ಲೋಬೊ, ಕೋಶಾಧಿಕಾರಿ ಎಡ್ವರ್ಡ್ ಫೆರ್ನಾಂಡಿಸ್   ಮತ್ತು ಇತರರು ಉಪಸ್ಥಿತರಿದ್ದರು.