ಎಸ್ ಎಸ್ ಎಲ್ ಸಿಯಲ್ಲಿ ಸ.ಶಾಲೆಗಳಲ್ಲಿ ಮೊದಲ ಸ್ಥಾನ ಪಡೆದಿರುವ ತಿಮ್ಮನಹಳ್ಳಿಯ ಸಿ.ಶ್ರಾವಣಿಗೆ ಶ್ರೀನಿವಾಸಪುರ ಸಮಾಜ ಸೇವಾ ಕನ್ನಡ ಸಾಹಿತ್ಯ ವೇದಿಕೆಯಿಂದ ಸನ್ಮಾನ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ತಾಲ್ಲೂಕು ಕೋನೇಟಿ ತಿಮ್ಮನಹಳ್ಳಿಯ ಸಿ.ಶ್ರಾವಣಿ ಎಸ್ ಎಸ್ ಎಲ್ ಸಿಯಲ್ಲಿ ಸ.ಶಾಲೆಗಳಲ್ಲಿ ಮೊದಲ ಸ್ಥಾನ ಪಡೆದಿರುವುದರಿಂದ ಶ್ರೀನಿವಾಸಪುರ ಸಮಾಜ ಸೇವಾ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ವಿದ್ಯಾರ್ಥಿನಿ ಸ್ವಗ್ರಾಮದಲ್ಲಿ ಅವರ ಮನೆಯಲ್ಲಿ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ.‌ನೌ.ಸಂ.ಅಧ್ಯಕ್ಷ ಎಂ.ನಾಗರಾಜ್, ಕಸಬಾ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಬೈಚೇಗೌಡ, ಪ್ರಾ.ಶಿ.ಸಂ.ಮಾಜಿ ಅಧ್ಯಕ್ಷ ಡಾ.ಆರ್.ರವಿಕುಮಾರ್, ಗ್ರಾ.ಪಂ. ಮಾಜಿ.ಸದಸ್ಯ ಗುರ್ರಪ್ಪ, ರೈತ ಸಂ.ಹಾಗು ಹ.ಸೇ.ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಪ್ಪ ,ಶಿಕ್ಷಕ ಮುನಿಶಾಮಿ.ಶ್ರೀನಿವಾಸಮೂರ್ತಿ, ವೇದಿಕೆ ಅಧ್ಯಕ್ಷ ಕೆ.ವಿ.ನಾಗರಾಜ್, ವೆಂಕಟಪ್ಪ ವಿಧ್ಯಾರ್ಥಿನಿ ಪೋಷಕರು ಹಾಜರಿದ್ದರು.