ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಭಿರ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ

JANANUDI.COM NETWORK

ಕುಂದಾಪುರ, 27-11-2020 ರಂದು ಸಾರ್ವಜನಿಕರಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಆರೋಗ್ಯ ತಪಾಸಣಾ ಶಿಭಿರ ಮತ್ತು ಕುಂದಾಪುರ ಪುರ ಸಭೆಯ 50 ಜನ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಸುಮಾರು 180 ಜನರು ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಪಾಲ್ಗೊಂಡರು. ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಅಥಿಥಿ ಗಳನ್ನು ಸ್ವಾಗತಿಸಿದರು. ಕುಂದಾಪರ ಪುರಸಭೆಯ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ಪುರಸಭೆಯ ಮುಖ್ಯಾಧಿಕಾರಿ ಶ್ರೀ ಗೋಪಾಲಕ್ರಷ್ಣ ಶೆಟ್ಟಿ ಉದ್ಗಾಟನೆ ಮಾಡಿ ಮಾತನಾಡಿದರು. ಲಯನ್ಸ್ ಸಂಸ್ತೆ ಕುಂದಾಪುರ ಇದರ ಕಾರ್ಯದರ್ಷಿ ಶ್ರೀ ರಾಜೇಂದ್ರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದವರು ಲಯನ್ಸ್ ಸಂಸ್ತೆ ಕುಂದಾಪುರ ಮತ್ತು ಲೈಫ್ ಕೇರ್ ಇದರ ಮಾಲಕರಾದ ಸೋಮನಾಥ್. ಕುಂದಾಪುರ ಪುರ ಸಭೆಯ ಎಲ್ಲಾ 50 ಜನ ಪೌರ ಕಾರ್ಮಿಕರಿಗೆ ಉಪಹಾರ ನೀಡಿ, ಪೋಷಣ, ಪ್ರೋಟೀನ್ ಮತ್ತು ಎನರ್ಜಿ ಬಾರ್ ನೀಡಿ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಲಯನ್ಸ್ ಸಂಸ್ತೆ ಕುಂದಾಪುರ ಇದರ ಅದ್ಯಕ್ಷರಾದ ಕೆ. ಚಂದ್ರಶೇಖರ್, ಲೈಫ್ ಕೇರಿನ ಸೋಮನಾಥ್, ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ ಮತ್ತು ಖಜಾಂಚಿ ಶಿವರಾಮ ಶೆಟ್ಟಿ ಹಾಜರಿದ್ದರು. ಸಭೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ, ಇತರ ಸದಸ್ಯರೂ ಲಯನ್ಸ್ ಸದಸ್ಯರೂ ಅಪಾರ ಸಂಖ್ಯ್ ಯಲ್ಲಿ ಹಾಜರಿದ್ದರು.
ಕಾರ್ಯದರ್ಶಿಯವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.