ಇವತ್ತಿನ ಕಾಲದಲ್ಲಿ ಹಣ ಸಂಪತ್ತಿನ ಹಾಗೇಯೇ ಡಾಟ ಕೂಡ ಒಂದು ಆಸ್ಥಿ : ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು:ತಾಂತ್ರಿಕ ಸೆಮಿನಾರನಲ್ಲಿ ಪ್ರೋ.ನವೀನ್ ಚಂದ್ರ

JANANUDI.COM NETWORK

ಇವತ್ತಿನ ಕಾಲದಲ್ಲಿ ಹಣ ಸಂಪತ್ತಿನ ಹಾಗೇಯೇ ಡಾಟ ಕೂಡ ಒಂದು ಆಸ್ಥಿ : ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು:ತಾಂತ್ರಿಕ ಸೆಮಿನಾರನಲ್ಲಿ ಪ್ರೋ.ನವೀನ್ ಚಂದ್ರ

ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಎನ್.ಪಿ ಪ್ರಾಬ್ಲಮ್” ಎನ್ನುವ ವಿಷಯದ ಮೇಲೆ ತಾಂತ್ರಿಕ ಸೆಮಿನಾರ್ ಕಾರ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ವಿಭಾಗವು ಆಯೋಜಿಸಿತ್ತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ, ಸಂಶೋಧನ ವಿಭಾಗದ,ಸಹಾಯಕ ಪ್ರಾಧ್ಯಾಪಕ ಪ್ರೋ.ನವೀನ್ ಚಂದ್ರರವರು ಆಗಮಿಸಿದ್ದರು.ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ತಮ್ಮ ಭಾಷಣದಲ್ಲಿ “ಇವತ್ತಿನ ಕಾಲದಲ್ಲಿ ಹಣ ಸಂಪತ್ತಿನ ಹಾಗೇಯೇ ಡಾಟ ಕೂಡ ಒಂದು ಆಸ್ಥಿಯಾಗಿದೆ.ಅದನ್ನು ಕೂಡ ರಕ್ಷಿಸುವುದು ಬಹುಮುಖ್ಯ”ಎಂದರು.ವಿದ್ಯಾರ್ಥಿಗಳಿಗೆ ಮತ್ತು ಭೋದಕ ಸಿಬ್ಬಂದಿವರ್ಗದವರಿಗೆ ಸೆಮಿನಾರ್ ವಿಷಯದ ಮೇಲೆ ಹಲವಾರು ಉದಾಹರಣೆಗಳನ್ನು ನೀಡಿ ಸಂಶೋದನೆಗೆ ಸಹಕಾರಿಯಾಗುವ ಸಲಹೆಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ||ಕಾಟಯ್ಯ ಜಿ.ಎಸ್, ಅಕಾಡೆಮಿಕ್ ಡೈರೆಕ್ಟರ್ ಡಾ||ಚಂದ್ರರಾವ್ ಮದನೆ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ, ಪ್ರೋ.ಮೇಲ್ವಿನ್ ಡೀಸೊಜರವರು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ರಜತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.