ಆರ್ ಎನ್ ಶೆಟ್ಟಿ ಶೈಕ್ಷಣಿಕ ಸಂಸ್ಥೆಗಳ  2019-20 ರ ಯಶಸ್ವಿ ವಾರ್ಷಿಕ ಕ್ರೀಡಾಕೂಟ 

ವರದಿ: ಕ್ರಷ್ಣಮೂರ್ತಿ ದೇವರಸ್

 

 

ಆರ್ ಎನ್ ಶೆಟ್ಟಿ ಶೈಕ್ಷಣಿಕ ಸಂಸ್ಥೆಗಳ  2019-20 ರ ಯಶಸ್ವಿ ವಾರ್ಷಿಕ ಕ್ರೀಡಾಕೂಟ   

 

 

ದಿನಾಂಕ 23-11-2019 ರಂದು ಅತ್ಯಂತ ಅದ್ದೂರಿ ಹಾಗೂ ಯಶಸ್ವಿಯಾಗಿ ಕುಂದಾಪುರ ಗಾಂಧಿ ಮೈದಾನದಲ್ಲಿ ಆರ್ ಎನ್ ಎಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಿತು.

 

 

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಬಾಂಡ್ಯಾ ರವರು ವಹಿಸಿದ್ದು, ಮುಖ್ಯ ಅತಿಥಿ ಹಾಗೂ ಕ್ರೀಡಾಕೂಟದ ಉದ್ಘಾಟಕರಾಗಿ ಸುಪ್ರಿಮ್ ಟೈಲ್ಸ್ ಮಾಲಕರಾದ ಶ್ರೀ ಜಯಕರ ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡಾಕ್ಷೇತ್ರದಲ್ಲಿ ಸಾಧಕರಾಗಲು ವಿದೇಶಿಗರಂತೆ ಸತತ 12 ತಿಂಗಳೂ ಅಭ್ಯಾಸ ಮಾಡಬೇಕು ಎಂದು ಕ್ರೀಡಾಳುಗಳಿಗೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ್ ಕುಮಾರ್ ಶೆಟ್ಟಿ ಪ್ರಾಸ್ತವಿಕವಾಗಿ ಮತನಾಡಿ ಎಲ್ಲರನ್ನು ಸ್ವಾಗತಿಸಿದರು.
ಕ್ರೀಡಾಕೂಟದ ಉಸ್ತುವಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ ‌ಯವರು ಉಪಸ್ಥಿತರನ್ನು ವಂದಿಸಿದರು.