ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರಿಗೆ ಕಮಲ ಪತ್ರ ಪ್ರಶಸ್ತಿ

ವರದಿ: ವಾಲ್ಟರ್ ಮೊಂತೇರೊ

 

 

 

ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರಿಗೆ ಕಮಲ ಪತ್ರ ಪ್ರಶಸ್ತಿ

 

 

 

 

ಬೆಳ್ಮಣ್ಣು ಜೇಸಿಐ ಘಟಕದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸುತ್ತ ಪೂರ್ವಾಧ್ಯಕ್ಷರಾಗಿರುವ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರು ಬೆಳ್ಮಣ್ಣು ಜೇಸಿಐ ಘಟಕಕ್ಕೆ ಕಳೆದ ಹತ್ತು ವರ್ಷಗಳಿಂದ ನೀಡಿದ ಸೇವೆಯನ್ನು ಗುರುತಿಸಿ ಘಟಕದ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐ ಅಧ್ಯಕ್ಷೆ ಶ್ವೇತಾ ಸುಭಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಳ್ಮಣ್ಣು ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಧರ್ ಭಟ್, ಜೇಸಿ ವಲಯದ ನಿಯೋಜಿತ ವಲಯಾಧ್ಯಕ್ಷ ಕಾರ್ತಿಕೇಯಾ ಮಧ್ಯಸ್ಥ, ನಿಯೋಜಿತ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್, ವಲಯಾಧಿಕಾರಿ ಸುಭಾಸ್ ಕುಮಾರ್ ಹಾಗೂ ಘಟಕದ ಪೂರ್ವಾಧ್ಯಕ್ಷರುಗಳು ಮೊದಲಾದವರಿದ್ದರು.