ಗಂಗೊಳ್ಳಿ ಪೊಲೀಸರಿಂದ ಅಂತರ್‌ ಜಿಲ್ಲಾ ಮೋಟಾರು ಸೈಕಲ್‌ ಕಳ್ಳರ ಬಂಧನ

JANANUDI.COM NETWORK

ಗಂಗೊಳ್ಳಿ,30-09-2021: ಈ ದಿನ ದಿನಾಂಕ ರಂದು ಮಾನ್ಯ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌ ವಿಷ್ಣುವರ್ಧನ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಉಡುಪಿ ಜಿಲ್ಲೆ ಹಾಗೂ ಶ್ರೀ ಶ್ರೀಕಾಂತ ಕೆ ಪೊಲೀಸ್‌ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್‌ ಠಾಣಾ ಅ.ಕ್ರ 89/2021ಕಲಂ 379 ಐಪಿಸಿ ಪ್ರಕರಣದಲ್ಲಿ ಭಾಗಯಾದ ಆರೋಪಿತರಾದ 1] ಫಕ್ರುದ್ದೀನ್‌ ರಾಜೆಸಾಬ್‌ ಜೋರಾಂ, ಪ್ರಾಯ: 22 ವರ್ಷ, ತಂದೆ: ರಾಜೆಸಾಬ್‌ ಜೋರಾಂ, ವಾಸ; ಅರ್ಬನ್‌ ಗಲ್ಲಿ, ಸವದತ್ತಿ ರೋಡ್‌, ನರಗುಂದ ತಾಲೂಕು, ಗದಗ ಜಿಲ್ಲೆ. ಮತ್ತು 2] ಕಿರಣ ಶರಣಪ್ಪ ಕುಂಬಾರ, ಪ್ರಾಯ: (19), ತಂದೆ: ಶರಣಪ್ಪ ಕುಂಬಾರ, ವಾಸ: ಕುಂಬಾರ ಓಣಿ ಗಣಪತಿ ದೇವಸ್ಥಾನದ ಹಿಂಭಾಗ, ನವಲಗುಂದ ತಾಲೂಕು, ದಾರವಾಡ
ಜಿಲ್ಲೆ ರವರನ್ನು ಈ ದಿನ ದಿನಾಂಕ 30-09-2021 ರಂದು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳು ರಾಜ್ಯದ ವಿವಿಧೆಡೆಗಳಿಂದ ಕಳವು ಮಾಡಿದ 5 ಮೋಟಾರು ಸೈಕಲ್‌ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 2,75,000/- ರೂ ಆಗಿರುತ್ತದೆ. ಶ್ರೀ ಸಂತೋಷ್‌ ಕಾಯ್ಕಿಣಿ ಪೊಲೀಸ್‌ ವೃತ್ತ ನಿರೀಕ್ಷಕರು ಬೈಂದೂರು ವೃತ್ತ ರವರ ನೇತೃತ್ವದಲ್ಲಿ ಶ್ರೀ ನಂಜಾ ನಾಯ್ಕ, ಪಿ.ಎಸ್‌.ಐ. ಗಂಗೊಳ್ಳಿ ಪೊಲೀಸ್‌ ಠಾಣೆ, ಶ್ರೀ ಅನಿಲ್‌ ಮಾದರ್‌ ಪಿ.ಎಸ್‌.ಐ (ತನಿಖೆ) ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೋಹನ ಪೂಜಾರಿ ಶಿರೂರು, ಚಂದ್ರಶೇಖರ ಅರೆಶಿರೂರು, ಶ್ರೀಧರ ಸೆಳ್ಳೆಕುಳ್ಳಿ, ಕೃಷ್ಣ ದೇವಾಡಿಗ, ಸುಜಿತ್‌ ಗೌಡ, ರಾಮು ಹೆಗ್ಡೆ, ರಾಘವೆಂದ್ರ ದೇವಾಡಿಗ, ಶಿವರಾಮ ನಾಯ್ಕ್‌ ಹಾಗೂ ಚಾಲಕರಾದ ರಾಜೇಶ್‌ ಡಿಸೋಜಾ, ದಿನೇಶ ಪಡುವರಿ ರವರು ಪಾಲ್ಗೊಂಡಿರುತ್ತಾರೆ.