ಹಳ್ಳಿಬೇರು ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

JANANUDI.COM NETWORK 

ಹಳ್ಳಿಬೇರು ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ


ಕೊಲ್ಲೂರು, ಒ.3: ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ.ಹಿ.ಪ್ರಾ. ಶಾಲೆ ಹಳ್ಳಿಬೇರು ಇಲ್ಲಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗಷ್ಟೆ ವರ್ಗಾವಣೆಗೊಂಡ ಶಿಕ್ಷಕ ಹರೀಶ್ ಕುಮಾರ್ ಮತ್ತು ಅವರ ಧರ್ಮಪತ್ನಿಗೆ ಸಮಸ್ತ ಗ್ರಾಮಸ್ತರ ಪರವಾಗಿ ಅತ್ಯಂತ ಆದರದ ಬೀಳ್ಕೊಡುಗೆ ಸಮಾರಂಭವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹರೀಶ್ ಕುಮಾರ್ ದಂಪತಿಗೆ ಸನ್ಮಾನಿಸಿ ಮಾತನಾಡಿದ ಕೊಲ್ಲೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಎಸ್.ಕುಮಾರ್ ಅವರು ‘ಈ ಶಿಕ್ಷಕರು ಅತ್ಯಂತ ಶ್ರದ್ದೆ ಆಸಕ್ತಿಯಿಂದ ಉತ್ತಮ ಬೋಧನೆ ಮತ್ತು ಶಾಲಾ ಅಭಿವ್ರದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಬಡ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿ ಅವರ ಬಾಳು ಬೆಳಕಾಗಿಸಿದ್ದಾರೆ. ಇವರಿಂದ ಕಲಿತ ವಿದ್ಯಾಥಿಗಳು ಕೂಡ ಅವರ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ‘ ಹೇಳಿದರು
ಕಾರ್ಯಕ್ರಮದಲ್ಲಿ ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರೇಮಾ, ಸದಸ್ಯರಾದ ಪ್ರಕಾಶ್, ಎಸ್.ಡಿಎಮ್.ಸಿ. ಅಧ್ಯಕ್ಷರಾದ ಅಶೋಕ್. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವರಾಜ್, ಗಿರಿಜಾ, ಗೀತಾ, ಮುಖ್ಯ ಶಿಕ್ಷಕ ಕೇಶವ ಮೂರ್ತಿ, ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಹರೀಶ್ ಕುಮಾರ್ ಕ್ರತ್ಞತೆಯನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಗೌರವ ಶಿಕ್ಷಕಿ ಜಾನಕಿ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಜಯಂತಿ ವಂದಿಸಿದರು.