ಸಂಗಮ್ ಜಂಕ್ಷನ್‍ನಲ್ಲಿ ಅಪಘಾತಕ್ಕಿಡಾದ ಮಹಿಳೆ ಸಾವು : ಸಂಗಮ್ ಜಂಕ್ಷನಲ್ಲಿ ಪ್ರಥಮ ಬಲಿ

JANANUDI NETWORK

ಸಂಗಮ್ ಜಂಕ್ಷನ್‍ನಲ್ಲಿ ಅಪಘಾತಕ್ಕಿಡಾದ ಮಹಿಳೆ ಸಾವು : ಸಂಗಮ್ ಜಂಕ್ಷನಲ್ಲಿ ಪ್ರಥಮ ಬಲಿ


ಕುಂದಾಪುರ, ಜು.6: ಕಳೆದ ಶನಿವಾರ ಸಂಜೆ ಅಪಘಾತಕ್ಕಿ ಇಡಾಗಿ ಗಂಭೀರವಾಗಿ ಘಾಯಗೊಂಡ ಚಿಕ್ಕನಸಾಲು ನಿವಾಸಿ ಪ್ರಮೀಳಾ (50) ಸಾವು ಬದುಕಿನ ಹೋರಾಟದಲ್ಲಿ ಕೊನೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ.
ಪ್ರಥಮ ಹಂತದಲ್ಲಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದು ಮಣಿಪಾಲದಲ್ಲಿ ಸೇರಿಸಲ್ಪಟ್ಟ ಪ್ರಮೀಳಾ ಕೆಲವು ದಿನ ಚಿಕಿತ್ಸೆ ಪಡೆದಿದ್ದಳು, ತೀವ್ರ ಗಂಭೀರವಾಗಿ ಘಾಯಗೊಂಡ ಪ್ರಮೀಳಾ ಚಿಕಿತ್ಸೆಗೆ ಸ್ಪಂದಿಸದೆ, ಅಜ್ಜರಕಾಡು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಳು.
ಈ ಅಪಘಾತ ನಡೆದಿದ್ದು ವಾಹನ ಚಾಲಕನ ನಿರ್ಲಕ್ಷ ಒಂದಾದರೆ, ಮತ್ತೊಂದು ಬಲವಾದ ಕಾರಣ ರಾಷ್ಟ್ರೀಯ ಹೆದ್ದಾರಿ ನವೀಕರಣ ಕಾರಣ. ಈ ಜಂಕ್ಷನಲ್ಲಿ ಪಾದಚಾರಿಗಳು ರಸ್ತೆ ಕ್ರಾಸ್ ಮಾಡಲಿಕ್ಕೆ ಹರಸಾಹಸ ಮಾಡ ಬೇಕು, ಅದರಲ್ಲೂ ಹಿರಿಯ ನಾಗರಿಕರಿಗೆ ಬಹಳ ಕಷ್ಟವಾಗುತ್ತದೆ. ವಾಹನ ಚಾಲಕರಿಗೂ ಕೂಡ ಚಿಕ್ಕನಸಾಲು ರಸ್ತೆ ಕ್ರಾಸ್ ಮಾಡಲು ತ್ರಾಸದಾಯಕವಾಗಿದೆ.
ಒಂದು ಬಲಿ ಪಡೆದಾಗಿದೆ, ಇನ್ನೆಷ್ಟು ಬಲಿ ಬೇಕೊ ಗೊತ್ತಿಲ್ಲಾ? ಸಂಬಂಧ ಪಟ್ಟವರು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.