ರೊಟಾರ್‍ಯಾಕ್ಟ್  ಕ್ಲಬ್ ಕುಂದಾಪುರ ದಕ್ಷಿಣದಿಂದ ಭಂಡಾರ್ಕಾರ್ಸ್ ಕಾಲೇಜು ಉಪನ್ಯಾಸಕರಿಗೆ ಅಲೋವೆರಾ ಗಿಡದ ಮಹತ್ವ ಹಾಗೂ ಪ್ರಯೋಜನದ ಕುರಿತ ಕಾರ್ಯಕ್ರಮ

JANANUDI.COM NETWORK

 

 

ರೊಟಾರ್‍ಯಾಕ್ಟ್  ಕ್ಲಬ್ ಕುಂದಾಪುರ ದಕ್ಷಿಣದಿಂದ ಭಂಡಾರ್ಕಾರ್ಸ್ ಕಾಲೇಜು ಉಪನ್ಯಾಸಕರಿಗೆ ಅಲೋವೆರಾ ಗಿಡದ ಮಹತ್ವ ಹಾಗೂ ಪ್ರಯೋಜನದ ಕುರಿತ ಕಾರ್ಯಕ್ರಮ

 

 

ಕುಂದಾಪುರ,ಜ.25. ರೊಟಾರ್‍ಯಾಕ್ಟ್  ಕ್ಲಬ್ ಕುಂದಾಪುರ ದಕ್ಷಿಣ ಇದರ ಆಶ್ರಯದಲ್ಲಿ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರದ ಉಪನ್ಯಾಸಕರಿಗೆ ಅಲೋವೆರಾ ಗಿಡದ ಮಹತ್ವ ಹಾಗೂ ಪ್ರಯೋಜನದ ಕುರಿತು ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ಉತ್ತಮ್ ಕುಮಾರ್ ಶೆಟ್ಟಿ ಅಲೋವೆರಾ ಗಿಡದ ಉಪಯೋಗವನ್ನು ಉಪನ್ಯಾಸಕರಿಗೆ ಸವಿಸ್ತಾರವಾಗಿ ವಿವರಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಮ್.ಗೊಂಡ ನೆರೆದಿರುವ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ಕೆ.ಪಿ.ಭಟ್ ಹಾಜರಿದ್ದರು. ಮಾಹಿತಿಯನ್ನು ನೀಡಿದ ಬಳಿಕ ರೊಟಾರ್‍ಯಾಕ್ಟ್ ಅಧ್ಯಕ್ಷರಾದ ಆಲ್ಡ್ರಿನ್ ಡಿಸೋಜ ನೆರೆದ ಎಲ್ಲ ಉಪನ್ಯಾಸಕರಿಗೆ ಅಲೋವೆರ ಗಿಡಗಳನ್ನು ವಿತರಿಸಿದರು.