ರಾ. ಹೆದ್ದಾರಿ 66ರ ಕುಂದಾಪುರ-ಬೈಂದೂರು ಮಧ್ಯದ ಅರಾಟೆ ಹೊಸ ಸೇತುವೆ ಬಿರುಕು ಬಿಟ್ಟಿದೆ:ಈಗ ಈ ಸೇತುವೆಯಿಂದ ಸಂಚಾರ ಸ್ಥಗಿತ

JANANUDI.COM NETWORK

ಕುಂದಾಪುರ,ಸೆ.26: ರಾಷ್ಟ್ರೀಯ ಹೆದ್ದಾರಿ 66ರ  ಬೈಂದೂರು – ಕುಂದಾಪುರದ ನಡುವೆ ಸಿಗುವ ಆರಾಟೆ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಬೈಂದೂರಿನಿಂದ ಕುಂದಾಪುರ ಬರುವ ಕಡೆಯಿಂದ ಸಂಚರಿಸುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ, ಈ.ಸೇತುವೆ ಹೊಸದಾಗಿ ಇತ್ತಿಗಷ್ಟೆ ನಿರ್ಮಾಣಗೊಂಡಿದ್ದು ಇಷ್ಟು ಬೇಗ ಬಿರುಕು ಕಾಣಿಸಿಕೊಂಡಿಡ್ಡು ಆಶ್ಚರ್ಯ ಚಕಿತವಾಗಿದೆ..

ಹೊಸ ಸೇತುವೆ ನಿರ್ಮಾಣವಾದ ನಂತರ ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿಸುವ ವಾಹನಗಳಿಗೆ ಈ ಸೇತುವೆಯಲ್ಲಿ ಮತ್ತು ಕುಂದಾಪುರದಿಂದ ಬೈಂದೂರು ಕಡೆಗೆ ಹೋಗುವ ವಾಹನಗಳಿಗೆ ಹಳೇ ಸೇತುವೆಯಲ್ಲಿ ಸಂಚರಿಸಲು ಧ್ವಿ ಪಥದಂತ್ತೆ ಅವಕಾಶ ಮಾಡಿಕೊಡಲಾಗಿತ್ತು

  ಈಗ  ಹೊಸ ಸೇತುವೆಯಲ್ಲಿ ಬಿರುಕು ಕಂಡುಬಂದ ಹಿನ್ನಲೆಯಲ್ಲಿ,ಸಂಚಾರ ಸ್ಥಗಿತಗೊಳಿಸಿದ್ದು, ಈಗ ಹಳೆಯ ಸೇತುವೆ ಮೂಲಕ ಎರಡು ಕಡೆಗಳ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.ಎಂದು ತಿಳಿದು ಬಂದಿದೆ.