ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಕೊಂಚ ಸಡಿಲಿಕೆ : ಸಡಲಿಕೆ ಯಾವುದಕ್ಕೆ ಇಲ್ಲಾ ಇದೆ ನೋಡಿ

JANANUDI..COM NETWORK

 

 

ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್ ಡೌನ್ ಕೊಂಚ ಸಡಿಲಿಕೆ : ಸಡಲಿಕೆ ಯಾವುದಕ್ಕೆ ಇಲ್ಲಾ ಇದೆ ನೋಡಿ 

 

 

ಬೆಂಗಳೂರು, ಏ. 22  ಬೆಂಗಳೂರು: ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕಾಗಿ ಸದ್ಯ ಎರಡನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿದ್ದು ಈ ನಡುವೆ ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದ ಲಾಕ್ ಡೌನ್ ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡು ಸ್ಥಳೀಯ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಕೆಲವೊಂದು ಅವಶ್ಯ ಚಟುವಟಿಕೆಗಳನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ.

   ರಾಜ್ಯ ಸರಕಾರವು ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆಗಳನ್ನು ಮಾಡಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಈ ಮಾರ್ಗಸೂಚಿ ಸೋಂಕು ಪ್ರಕರಣಗಳು ಅಧಿಕವಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ಎಂದು ತಿಳಿಸಿ ಈ ಆದೇಶವು ಇಂದು ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

   ಆದರೆ ಅಂತರ ಜಿಲ್ಲೆಯ ಸಂಚಾರವಾಗಲೀ, ದ್ವಿಚಕ್ರ ವಾಹನದಲ್ಲಿ ಓಡಾಟಕ್ಕೆ ಅಥವಾ ಸಾರಿಗೆ ಸಂಚಾರವಾಗಲಿ ಆರಂಭಕ್ಕೆ ಅನುಮತಿ ಇರುವುದಿಲ್ಲಾ. ಕೇವಲ ಲಾರಿ ರಿಪೇರಿ ಗ್ಯಾರೇಜ್, ಡಾಬಾ, ಕೊರಿಯರ್ ಸೇವೆ, ಪ್ಲಂಬರ್ , ಎಲೆಕ್ಟ್ರೀಷಿಯನ್, ಬಡಗಿ, ಕೇಬಲ್ ಹಾಗೂ ಡಿಟಿಎಚ್ ಆಪರೇಟರ್, ಅಗತ್ಯ ವಸ್ತುಗಳ ಆನ್ ಲೈನ್ ಡೆಲಿವರಿ, ಆಹಾರ ಸಂಸ್ಕರಣಾ ಘಟಕ ಅನುಮತಿ ನೀಡಲಾಗಿದೆ.  ಮುಂಗಾರು ಪೂರ್ವದ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿರುವುದರಿಂದ ರಸಗೊಬ್ಬರ, ಬೀಜ ಹಾಗೂ ಔಷಧಿ ಮಾರಾಟಕ್ಕೆ ಅನುಮತಿಯನ್ನು ನೀಡಲಾಗಿದೆ.ಮದ್ಯ ಮಾರಾಟ, ಬಸ್ ಸಂಚಾರ, ರೈಲು ಸಂಚಾರ, ಮೆಟ್ರೋ ಹಾಗೂ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ. ಆಟೋ, ಕ್ಯಾಬ್ ಗಳ ಓಡಾಟ ಹಾಗೂ ಚಿತ್ರಮಂದಿರಗಳ ತೆರೆಯುವಿಕೆಗೂ ಅನುಮತಿ ನೀಡಲಾಗಿಲ್ಲ. ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಬಸ್ಸುಗಳು ರಸ್ತೆಗೆ ಇಳಿಯುವುದಿಲ್ಲ.

   ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ವಲಯ ಮೀನುಗಾರಿಕೆ ವಲಯಗಳಿಗೆ ಸಂಬಂಧಿಸಿದಂತೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು.   ಬಸ್ ಸಂಚಾರ , ಮೆಟ್ರೋ , ಆಟೋ ಕ್ಯಾಬ್ , ರೈಲು, ಮದ್ಯ ಮಾರಾಟ, ಧಾರ್ಮಿಕ ಸಭೆ ಸಮಾರಂಭ , ಚಿತ್ರಮಂದಿರ ಮಾಲ್ , ಐಟಿ ಬಿಟಿ , ವಲಯ, ಶಾಲಾ – ಕಾಲೇಜುಗಳಿಗೆ ಯಾವುದೇ ಲಾಕ್ ಡೌನ್ ರಿಲೀಫ್ ನ್ನು ಸರ್ಕಾರ ನೀಡದೆ ಯಥಾ ಸ್ಥಿತಿ ಮುಂದುವರಿದಿದೆ.

    ಧಾರ್ಮಿಕ ಸಭೆ-ಸಮಾರಂಭಗಳು, ಜನಸಂದಣಿ ಸೇರಲು ನಿರ್ಬಂಧ ಮುಂದುವರಿಯಲಿದೆ. ಕೃಷಿ ಹಾಗೂ ಮೀನಗಾರಿಕಾ ವಲಯಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.ಹೊಟೇಲುಗಳಲ್ಲಿ ಕುಳಿತು ಆಹಾರ ಸೇವನೆಗೆ ಅವಕಾಶವಿಲ್ಲ. ಆಹಾರ ಪದಾರ್ಥಗಳ ಪಾರ್ಸೆಲ್ ಸೇವೆಗೆ ಮಾತ್ರವೇ ಸದ್ಯಕ್ಕೆ ಅನುಮತಿ ನೀಡಲಾಗಿದೆ. ಅಂತರ್ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ