ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿಜೃಂಭಣೆಯ ಸಾವಿಷ್ಕಾರ್ ಕಾರ್ಯಕ್ರಮ

JANANUDI.COM NETWORK

 

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿಜೃಂಭಣೆಯ ಸಾವಿಷ್ಕಾರ್ ಕಾರ್ಯಕ್ರಮ 

 

 

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ 15ನೇ ವರ್ಷದ ಆಚರಣೆಯ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ಸ್ ನ ಮಾಲೀಕರಾದ ಶ್ರೀ ಪ್ರಕಾಶ್ ಶೆಟ್ಟಿ , ನಕ್ಷತ್ರ ಜ್ಯುವೆಲ್ಲರ್ಸ್ ನ ಮಾಲೀಕರಾದ, ನವೀನ್ ಹೆಗ್ಡೆ ಮತ್ತು ಕುಂದಾಪುರದ ಉದ್ಯಮಿ ಕೆ ಆರ್ ನಾಯಕ್ ರವರು ಚಾಲನೆ ನೀಡಿದರು.
ಮುಖ್ಯ ಅತಿಥಿ ನವೀನ್ ಹೆಗ್ಡೆ ಅವರು ವಿದ್ಯಾರ್ಥಿಗಳ ಪ್ರತಿಭೆಗಳನ್ನ ಪ್ರದರ್ಶಿಸಲು ಸಾವಿಷ್ಕಾರ ಉತ್ತಮ ವೇದಿಕೆ ಆಗಿದೆ ಎಂದರು. ಇನ್ನೋರ್ವ ಅತಿಥಿ ಪ್ರಕಾಶ್ ಶೆಟ್ಟಿ ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನದಿಂದ ತಮಗೆ ಎದುರಾಗುವ ಸವಾಲುಗಳನ್ನ ಜಯಿಸಬೇಕು ಎಂದು ಕರೆ ನೀಡಿದರು, ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಅತಿಥಿಗಳಾದ ಕೆ ಆರ್ ನಾಯಕ್ ಮತ್ತು ಪ್ರಕಾಶ್ ಶೆಟ್ಟಿ ಅವರ ಸಾಮಾಜಿಕ ಕಳಕಳಿಯ ಕಾರ್ಯ ಗಳನ್ನು ಪರಿಗಣಿಸಿ ಮುಖ್ಯ ಅತಿಥಿ ಮತ್ತು ಇತರ ಗಣ್ಯರು ಸನ್ಮಾನಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕಾಟಯ್ಯ ಜಿ ಎಸ್ ಮತ್ತು ಅಕಾಡೆಮಿಕ್ ಡೈರೆಕ್ಟರ್ ಚಂದ್ರ ರಾವ್ ಮದಾನೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಾಧ್ವಿ ಎಸ್ ಕಾರ್ಯಕ್ರಮ ನಿರೂಪಿಸಿದ್ದರು.