ಬೆಳ್ಮಣ್ಣು ಜೇಸಿಐ : ಜೇಸಿರೇಟ್ ಮತ್ತು ಜೂನಿಯರ್ ಜೇಸಿ ವಿಭಾಗದ ಪದಗ್ರಹಣ ಸಮಾರಂಭ

ವರದಿ: ವಾಲ್ಟರ್ ಮೊಂತೇರೊ 

 

 

ಬೆಳ್ಮಣ್ಣು ಜೇಸಿಐ : ಜೇಸಿರೇಟ್ ಮತ್ತು ಜೂನಿಯರ್ ಜೇಸಿ ವಿಭಾಗದ ಪದಗ್ರಹಣ ಸಮಾರಂಭ

 

 

ಬೆಳ್ಮಣ್ಣು ಜೇಸಿಐನ ಜೇಸಿರೇಟ್ ಮತ್ತು ಜೂನಿಯರ್ ಜೇಸಿ ವಿಭಾಗದ ಪದಗ್ರಹಣ ಸಮಾರಂಭವು ಬುಧವಾರ ಬೆಳ್ಮಣ್ಣು ಜೇಸಿಐನ ಪೂರ್ವಾಧ್ಯಕ್ಷ ಸತೀಶ್ ಕೋಟ್ಯಾನ್‍ರವರ ಮನೆಯಲ್ಲಿ ಜರಗಿತು.
ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್‍ರವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಜೇಸಿರೇಟ್ ವಿಭಾಗದ ಅಧ್ಯಕ್ಷೆ ಸೌಜನ್ಯ ಸತೀಶ್ ಕೋಟ್ಯಾನ್‍ರವರು ಜೇಸಿರೇಟ್ ವಿಭಾಗದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷ ಸಂದೀಪ್ ಕುಲಾಲ್ ಜೇಜೇಸಿ ವಿಭಾಗದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ಜೇಸಿರೇಟ್ ವಲಯ ಸಂಯೋಜಕಿ ಜ್ಯೋತಿ ರಮಾನಾಥ್ ಶೆಟ್ಟಿ, ಜೇಜೇಸಿ ವಲಯ ಸಂಯೋಜಕ ಮರಿಯಪ್ಪ ಪರ್ಕಳ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿ ಅಧ್ಯಕ್ಷ ರಾಜೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ಅವಿನಾಶ್ ಪೂಜಾರಿ ಉಪಸ್ಥಿತಿರಿದ್ದರು.