ಬೆಂಗಳೂರು ಬಸ್ಸಿನಿಂದ ಬರುತಿದ್ದ ಕುಂದಾಪುರದ ಯುವಕ ಮನೆ ಹತ್ತಿರ ಬರುವಾಗ ಬಸ್ಸಿನಲ್ಲೇ ಮ್ರತ ಪಟ್ಟ

JANANUDI.COM NETWORK

 

 

ಬೆಂಗಳೂರು ಬಸ್ಸಿನಿಂದ ಬರುತಿದ್ದ ಕುಂದಾಪುರದ ಯುವಕ ಮನೆ ಹತ್ತಿರ ಬರುವಾಗ ಬಸ್ಸಿನಲ್ಲೇ ಮ್ರತ ಪಟ್ಟ

 

 

ಕುಂದಾಪುರ: ೧೬ ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ಕುಂದಾಪುರದ ತನ್ನ ಮನೆಗೆ ಬರುತಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕ ಬಸ್‌ನಲ್ಲೇ ಕುಂದಾಪುರಕ್ಕೆ ಹತ್ತಿರ  ಮುಟ್ಟುವಾಗ  ಸಾವನ್ನಪ್ಪಿದ್ದ ಆಘಾತಕಾರಿ ದುಖಭರಿತ ಘಟನೆ ವರದಿಯಾಗಿದೆ.

ಮೃತ ಯುವಕ ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿಯವರ ಮಗ    ಚೈತನ್ಯ (25)  ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದಿದ್ದ ಯುವಕ ಎರಡು ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡಿಕೊಂಡಿದ್ದರು.

       ಕೆಲಸ ಸಪ್ಪೆಗಿದ್ದ ಕಾರಣ  ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ ಸೋಮವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಊರಿಗೆ ಹೊರಟಿದ್ದರು. ಬೆಳಿಗ್ಗೆ 6.30ರ ಸುಮಾರಿಗೆ ಕರೆ‌ಮಾಡಿದ್ದ ಚೈತನ್ಯ ಬಾರ್ಕೂರು ಸಮೀಪ ಮುಟ್ಟಿದ್ದೆನೆಂದು ಮನೆಯವರಿಗೆ ತಿಳಿಸಿದ್ದ.

      ಆದರೆ ಚೈತನ್ಯ ಕೋಟೇಶ್ವರದಲ್ಲಿ  ಇಳಿಯದ ಕಾರಣ ನಿರ್ವಾಹಕನಿಗೆ ಅನುಮಾನ ಬಂದು ಹತ್ತಿರ ಹೋಗಿ ಎಚ್ಚರಿಸಲು ನೋಡಿದಾಗ  ಚೈತನನ್ಯ ಅಸ್ವಸ್ಥಗೊಂಡು ಮಲಗಿದ್ದರು. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಚೈತನ್ಯ ಅವರನ್ನು ದಾಖಲಿಸಲು ಕರೆದುಕೊಂಡು ಹೋಗಲಾಯಿತು ಆದರೆ. ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

     ಕಳೆದ ಕೆಲವು ತಿಂಗಳ ಹಿಂದೆ ಇದೇ ರೀತಿಯಲ್ಲಿ ಇನ್ನೋರ್ವ ಯುವಕನೂ ಬೆಂಗಳೂರಿನಿಂದ ಮನೆಗೆ ಬರುವಾಗ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಇನ್ನೋರ್ವ ಯುವಕನ ಸಾವಿಗೆ  ತುತ್ತಾಗಿ ಕುಂದಾಪುರದಲ್ಲಿ ಆತಂಕ ಉಂಟಾಗಿದೆ.