ಬಸ್ರೂರು  ಸರಕಾರಿ ಪ್ರೌಡ ಶಾಲೆಯಲ್ಲಿ  ವಿದ್ಯಾರ್ಥಿಗಳಿಂದ  ಅಪರೂಪದ  ಮಕ್ಕಳ ಸಂತೆ

JANANUDI.COM NETWORK

 

ಬಸ್ರೂರು  ಸರಕಾರಿ ಪ್ರೌಡ ಶಾಲೆಯಲ್ಲಿ  ವಿದ್ಯಾರ್ಥಿಗಳಿಂದ  ಅಪರೂಪದ  ಮಕ್ಕಳ ಸಂತೆ 

 

 

ಕುಂದಾಪುರ, ಡಿ.೮: ಬಸ್ರೂರು  ಸರಕಾರಿ ಪ್ರೌಡ ಶಾಲೆಯಲ್ಲಿ  ವಿದ್ಯಾರ್ಥಿಗಳಿಂದ ಅಪರೂಪದ ಮಕ್ಕಳ ಸಂತೆ ನಡೆಯಿತು. ಈ ಸಂತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ  ಜ್ಯೋತಿ  ಈ ಸಂತೆಯನ್ನು ಉದ್ಘಾಟಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ   ಕುಂದಾಪುರ ವಲಯದ ಶಿಕ್ಷಣ ಅಧಿಕಾರಿ ಶ್ರೀ ಅಶೋಕ ಕಾಮತ್  ಭೇಟಿ ಮಾಡಿ ಸಂತಸ ಪಟ್ಟರು.

   ಮಕ್ಕಳು ತಮ್ಮ ಮನೆಯಿಂದ ವಿವಿಧ ರೀತಿಯ ತರಕಾರಿ, ತೆಂಗಿನ ಕಾಯಿ ಎಪ್ಪಲ್ ಜ್ಯೂಸ್, ಕಲ್ಲಂಗಡಿ ಜ್ಯೂಸ್, ಚಪಾತಿ ಕುರ್ಮಾ ಹೀಗೆ ಹಲವು ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ಬಂದು ಮಾರಟ ಮಾಡಿದರು.  ಮಕ್ಕಳ ಹೆತ್ತವರು, ಶಿಕ್ಷಕರು ಮತ್ತು ಉರವರು ಮಕ್ಕಳ ಸಂತೆಗೆ ಪ್ರೋತ್ಸಾಹ ನೀಡಿ ಮಕ್ಕಳಲ್ಲಿ ವ್ಯಹರಿಸಿದರು.

    ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕರು ಶಾಲಾ ಸಮಿತಿಯ ಅಬ್ದುಲ್ ಅಜೀಜ್ ಬಸ್ರೂರು ಉಪಸ್ಥಿತರಿದ್ದರು.