ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಉಪಾಧ್ಯರಾಗಿ ಮಂಜುನಾಥ ಆರಾಧ್ಯ ಚುನಾಯಿತರಾಗಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಉಪಾಧ್ಯರಾಗಿ ಮಂಜುನಾಥ ಆರಾಧ್ಯ ಚುನಾಯಿತರಾಗಿದ್ದಾರೆ.

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಉಪಾಧ್ಯರಾಗಿ ಮಂಜುನಾಥ ಆರಾಧ್ಯ ಚುನಾಯಿತರಾಗಿದ್ದಾರೆ.
  ಈ ಹಿಂದೆ ಅಧ್ಯಕ್ಷರಾಗಿದ್ದ ನಾರಾಯಣಮ್ಮ ಹಾಗೂ ಉಪಾಧ್ಯಕ್ಷರಾಗಿದ್ದ ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
  ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಜೆಡಿಎಸ್‌ನ ಶಿವಮ್ಮ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಂಜುನಾಥ ಆರಾಧ್ಯ ಹಾಗೂ ಜೆಡಿಎಸ್‌ನ ವೆಂಕಟರಮಣರೆಡ್ಡಿ ನಾಮಪತ್ರ ಸಲ್ಲಿಸಿದ್ದರು. 
  ಗ್ರಾಮ ಪಂಚಾಯಿತಿಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್‌ನ ಶಂಕರಮ್ಮ 14 ಹಾಗೂ ಮಂಜುನಾಥ ಆರಾಧ್ಯ 13 ಮತಗಳನ್ನು ಪಡೆದು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾದರು. 
  ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಗೌಸ್‌ಸಾಬ್‌, ಕಾರ್ಯದರ್ಶಿ ರವಿಕುಮಾರ್‌ ಇದ್ದರು.
  ರಾಯಲ್ಪಾಡ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಮುಖಂಡರಾದ ಸರಿತಾ ಸೋಮಶೇಖರ್‌, ಜಿ.ಆರ್‌.ಸತ್ಯನಾರಾಯಣ, ರಾಜಾರೆಡ್ಡಿ, ಆರ್‌.ವೆಂಕಟೇಶ್‌, ಜಿ.ವಿ.ರಮೇಶ್‌ ಬಾಬು, ವೈ.ಎಂ.ಅಮೀರ್‌ ಖಾನ್‌, ಜಿ.ವಿ.ಸಲ್ಲಪ್ಪ, ಅಮರನಾರಾಯಣ, ರಾಜಣ್ಣ, ಗಂಗಪ್ಪ, ಪೆದ್ದಣ್ಣ, ಮಂಜು ಚುನಾಯಿತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.