ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನಿಂದ ಮರಾಠಿ, ಕಾರ್ಮಿಕ ಸಮುದಾಯಗಳಿಗೆ ನೆರವು

JANANUDI.COM NETWORK

 

ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನಿಂದ ಮರಾಠಿ, ಕಾರ್ಮಿಕ ಸಮುದಾಯಗಳಿಗೆ ನೆರವು 

 

 

 

ಕುಂದಾಪುರ, ಎ.12 ಹಟ್ಟಿಯಂಗಡಿ, ಹೊಸಾಡು, ಮುಳ್ಳಿಕಟೆ, ಬಿದ್ಕಲ್‍ಕಟ್ಟೆ, ಅಮಾಸೆಬೈಲು ಮುಂತಾದ ಹೆದ್ದಾರಿ ಬದಿಯಲ್ಲಿ ಚಪ್ಪರ ಕಟ್ಟಿಕೊಂಡು ವಾಸಿಸುತ್ತಿರುವ ಉತ್ತರ ಕನ್ನಡ ಮೂಲದ ಮರಾಠಿ ಮಾತೃ ಭಾಷೆಯ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್ ಮೂಲಕ ನೆರವು ನೀಡಲಾಯಿತು.
ತಹಶೀಲ್ದಾರ್ ತಿಪ್ಪೆಸ್ವಾಮಿ ಮಾರ್ಗದರ್ಶನದಲ್ಲಿ ಇವರಿಗೆ ಅಕ್ಕಿ, ಬೇಳೆ, ಎಣ್ಣೆ ಸಾಂಬಾರು, ಸಾರು ಹುಡಿಗಳು ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳನ್ನು ಒದಗಿಸಲಾಗಿದೆ. ಕಂದಾಯ ಇಲಾಖೆಯ ಸಹಕಾರವನ್ನು ಇವರು ಮುಕ್ತಕಂಠದಿಂದ ಹೊಗಳಿದ್ದಾರೆ. ಸುಮಾರು 400 ಕಟುಂಬಗಳಿಗೆ ದಿನಸಿ ವಸ್ತುಗಳನ್ನು ಗಿಳಿಯರು ಕುಶಲಹೆಗಡೆ ಟ್ರಸ್ಟ್‍ನಿಂದ ಒದಗಿಸಲಾಗಿದೆ.