ಕೋವಿಡ್-19 ವೈರಾಣು ಭೀತಿ  ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದ ಕುಟುಂಬ ಕೊನೆಗೆ ನಾಗರಿಕ ಸಮಿತಿಯಿಂದ ಶವದ ಅಂತ್ಯಸಂಸ್ಕಾರ

JANANUDI.COM NETWORK

 

 

ಕೋವಿಡ್-19 ವೈರಾಣು ಭೀತಿ  ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದ ಕುಟುಂಬ ಕೊನೆಗೆ ನಾಗರಿಕ ಸಮಿತಿಯಿಂದ ಶವದ ಅಂತ್ಯಸಂಸ್ಕಾರ 

 

 

ಉಡುಪಿ, ಕೋವಿಡ್-19 ರ ವ್ಯಾಧಿಯ ಭಯದಿಂದ ವೃದ್ಧನ ಅಂತ್ಯಸಂಸ್ಕಾರ ನಡೆಸಲು ಮ್ರತ ಹೊಂದಿದ ಕುಟುಂಬದವರು ಭಯಭೀತರಾಗಿ ಅಂತ್ಯಸಂಸ್ಕಾರ ಮಾಡಲು  ಹಿಂದೇಟು ಹಾಕಿದರು. ಕೊನೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಮ್ರತ ಹೊಂದಿದ ವೃದ್ಧನ ಅಂತ್ಯಸಂಸ್ಕಾರವನ್ನು ನೆರವೆರಿಸಿತು. ಇಂತಹದೊಂದು ಕ್ರತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಒಳರೋಗಿಯಾಗಿ ದಾಖಲಾಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು  ಸಿದ್ಧಾಪುರ – ಕಮಲಶಿಲೆಯ ನಿವಾಸಿ ಮಂಜುವೀರ (80ವ) ಮರಣ ಹೊಂದಿದರು. ಹೀಗಿರುವಾಗ  ಉಡುಪಿ, ಕೋವಿಡ್-19 ಸೋಂಕಿತ ಮತ್ತು ಶಂಕಿತ ರೋಗಿಗಳಿಗೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಳು ನಡೆಯಲು ಪ್ರಾರಂಭವಾದವು ಈ ಮೊದಲು ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯದ ಸುರಕ್ಷತೆಯ  ಕಾರಣದಿಂದ ಔಷಧಿಗಳ ನೀಡಿ, ದಾಖಲಾಗಿದ್ದ ರೋಗಿಗಳ ಬಿಡುಗಡೆ ಮಾಡಲಾಗಿತ್ತು. ವೃದ್ಧ ಮಂಜವೀರನಿಗೆ ಬಳಿ ಯಾರಿಲ್ಲದೆ ಅತಂತ್ರ ಪರಿಸ್ಥಿತಿ ಎದುರಾಯಿತು. ಸರಕಾರದ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಏಲ್ಲಿಗೂ ಹೋಗಲು ಅವರಿಗೆ ದಿಕ್ಕುತೋರದಾಯಿತು. ನಗರದ ಸಾರ್ವಜನಿಕ ಸ್ಥಳದಲ್ಲಿ ವೃದ್ಧರು ಅಸಹಾಯಕರಾಗಿ ಕಂಡು ಬಂದಾಗ, ಅವರನ್ನು ರಕ್ಷಿಸಿ, ಹೂಡೆ- ಗುಜ್ಜರಬೆಟ್ಟು ಇಲ್ಲಿಯ ವಯೋವೃದ್ಧರ ಆಶ್ರಮದಲ್ಲಿ ನೆಲೆ ಕಲ್ಪಿಸಲಾಯಿತು. ನಾಲ್ಕು ದಿನಗಳ ಕಾಲ ಅಲ್ಲಿದ್ದ ಅವರು ಮೃತಪಟ್ಟರು. ವೃದ್ಧರ ಶವವನ್ನು ಆಶ್ರಮದ ವ್ಯವಸ್ಥಾಪಕರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಕ್ಷಿಸಿಟ್ಟಿದ್ದರು.

ಕೊನೆಗೆ ಮೃತನ ಕುಟುಂಬಿಕರಿಗೆ ವಿಷಯ ಮುಟ್ಟಿಸಲಾಯಿತು. ಕೋವಿಡ್-19 ರ ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಅದೇ ಆಸ್ಪತ್ರೆಯಲ್ಲಿ ವೃದ್ಧರು  ಕೂಡ ಚಿಕಿತ್ಸೆ ಪಡೆಯುತ್ತಿದ್ದರಿಂದ ಕುಟುಂಬಿಕರು, ಕೋವಿಡ್ – 19 ಕಾಯಿಲೆ ತಮಗೂ ಬರಬಹುದು ಎನ್ನುವ ಭಯದಿಂದ ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದರು. ಅವರ ಮನವೊಲಿಸವ ಪ್ರಯತ್ನಗಳು ವಿಫಲವಾದವು. ಕೊನೆಗೆ ಆಶ್ರಮ ವ್ಯವಸ್ಥಾಪಕರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಲ್ಲಿ ನೆರವು ಕೊರಲಾಯಿತು. ಅದೇ ಸಮಯದಲ್ಲಿ ಉಡುಪಿಯಲ್ಲಿ ವೃದ್ಧರ ಮಗ ಜಗದೀಶನನ್ನು ಪತ್ತೆಗೊಳಿಸಲಾಯಿತು.

ಕೊನೆಗೆ ಮಗನ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವೃದ್ಧನ ಅಂತ್ಯಸಂಸ್ಕಾರವನ್ನು ಇಂದ್ರಾಳಿ ಹಿಂದು ರುದ್ರಭೂಮಿಯಲ್ಲಿ ಮಾ.30 ರಂದು ನಡೆಸಲಾಯಿತು. ಶವ ಸಂಸ್ಕಾರದ ಖರ್ಚು ವೆಚ್ಚಗಳನ್ನು ನಾಗರಿಕ ಸಮಿತಿ ಭರಿಸಿತು. ಶವಸಾಗಟ ನಡೆಸಲು ಪಂಚರತ್ನ ಸೇವಾ ಟ್ರಸ್ಟ್ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು. ಅಂತ್ಯಸಂಸ್ಕಾರ ಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜೇಶ್ ಕಾಪು, ಪಡುಬಿದ್ರೆ ಚೇತನ್ ಭಾಗಿಗಳಾದರು. ನಂತರ ಮೃತನ ಮಗನಿಗೆ ಕಮಲಶಿಲೆಗೆ ತೆರಳಲು ವಾಹನ ವ್ಯವಸ್ಥೆ ಇಲ್ಲದ ಕಾರಣದಿಂದ ಬೊರ್ಡ್ ಹೈಸ್ಕೂಲು ಇಲ್ಲಿಯ ವಲಸೆ ಕಾರ್ಮಿಕರ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸುವ ವ್ಯವಸ್ಥೆಯನ್ನು ಸಮಿತಿಯವರು ಮಾಡಿದರು.