ಕೋಲಾರ:- ಪ್ರವಾಹ,ನೆರೆಸಂತ್ರಸ್ಥರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ, ಉಸ್ತುವಾರಿ ಸಚಿವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ : ಅಬಕಾರಿ ಸಚಿವ ಹೆಚ್.ನಾಗೇಶ್ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಕೋಲಾರ:- ಪ್ರವಾಹ,ನೆರೆಸಂತ್ರಸ್ಥರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ, ಉಸ್ತುವಾರಿ ಸಚಿವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ : ಅಬಕಾರಿ ಸಚಿವ ಹೆಚ್.ನಾಗೇಶ್ 

ಕೋಲಾರ:- ಪ್ರವಾಹ,ನೆರೆಸಂತ್ರಸ್ಥರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ, ಉಸ್ತುವಾರಿ ಸಚಿವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ರಾಜ್ಯ ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ವಿರೋಧ ಪಕ್ಷಗಳ ಮುಖಂಡರು ನೆರೆಸಂತ್ರಸ್ಥರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ `ಅವರು ವಿರೋಧ ಪಕ್ಷಗಳವರಲ್ಲವೇ ಅವರು ವಿರೋಧ ಮಾಡುವುದೇ ಕೆಲಸ ತಾನೆ ಮಾಡಲಿ ಬಿಡಿ ಎಂದರು.
ಮುಖ್ಯಮಂತ್ರಿಗಳು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ, ಆಯಾ ಕ್ಷೇತ್ರದ ಶಾಸಕರು,ಉಸ್ತುವಾರಿ ಸಚಿವರು ಗಮನಹರಿಸಲು ಸೂಚಿಸಿದ್ದಾರೆ, ಡಿಸಿಗಳ ಜತೆ ಸಂವಾದ ನಡೆಸಿ ಸಮಸ್ಯೆ ಪರಿಹಾರಕ್ಕೆ ಎಲ್ಲ ಕ್ರಮ ಕೈಗೊಂಡಿದ್ದಾರೆ ಎಂದರು.
ಜಿಲ್ಲಾಡಳಿತ ಈಗಾಗಲೇ ನೆರೆ ಸಂತ್ರಸ್ಥ ಫಲಾನುಭವಿಗಳ ಪಟ್ಟಿ ತಯಾರಿಸುತ್ತಿದ್ದು, ಆ ಪಟ್ಟಿಯಂತೆ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆಮಾಡುತ್ತಿದೆ ಎಂದು ತಿಳಿಸಿದರು.